ಮಂಡ್ಯದಲ್ಲಿ ಭತ್ತದ ನಾಟಿ ಮಾಡಲಿದ್ದಾರೆ ಸಿಎಂ
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶನಿವಾರ ಮಂಡ್ಯದಲ್ಲಿ ರೈತರೊಂದಿಗೆ ಗದ್ದೆಗೆ ಇಳಿದು ಭತ್ತದ ನಾಟಿ ಮಾಡಲಿದ್ದಾರೆ.
ಬೆಂಗಳೂರು : ಮಳೆ ಅಭಾವದಿಂದ ಕಳೆದ ಮೂರು ವರ್ಷದಿಂದ ಮಂಡ್ಯದಲ್ಲಿ ಭತ್ತ ನಾಟಿ ಮಾಡಿರಲಿಲ್ಲ.
ಮೂರು ವರ್ಷಗಳ ಬಳಿಕ ಭತ್ತ ನಾಟಿ ಮಾಡುತ್ತಿದ್ದು, ಅವರೊಂದಿಗೆ ನಾನೂ ಸಂತಸ ಹಂಚಿಕೊಳ್ಳಲು ಶನಿವಾರ ಮಂಡ್ಯದಲ್ಲಿ ಭತ್ತ ನಾಟಿ ಮಾಡಲಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
3 ವರ್ಷದಿಂದ ತೊಗರಿ ಮತ್ತಿತರ ಬೆಳೆಗಳನ್ನು ಹಾಕುತ್ತಿದ್ದರು. ಇದೀಗ ವಿರಾಮದ ಬಳಿಕ ಭತ್ತ ನಾಟಿ ಮಾಡುವ ಅವಕಾಶ ಸಿಕ್ಕಿದೆ. ಹೀಗಾಗಿ ಕೆಲ ಕಾಲ ಅವರೊಂದಿಗೆ ಕಳೆಯುತ್ತೇನೆ ಎಂದರು.