ಸಿಎಂ ಹನುಮ ಜಯಂತಿ ಶುಭಾಶಯ : ಟ್ವಿಟ್ಟಿರಿಗರ ಆಕ್ರೋಶ
ಈ ನಡುವೆ ಸ್ವತಃ ಮುಖ್ಯಮಂತ್ರಿಯವರೆ ಈ ಬಗ್ಗೆ ಪ್ರತಿಕ್ರಯಿಸಿ ' ನಾವು ಯಾವ ಜಯಂತಿಯನ್ನು ವಿರೋಧಿಸುವುದಿಲ್ಲ. ಆದರೆ ಹಬ್ಬದ ಹೆಸರಿನಲ್ಲಿ ಗಲಭೆ ಉಂಟು ಮಾಡುವವರನ್ನು ನಾವು ಸಹಿಸುವುದಿಲ್ಲ' ಎಂದಿದ್ದಾರೆ.
ಹನುಮ ಜಯಂತಿ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶುಭಾಶಯ ಕೋರಿದಕ್ಕೆ ಟ್ವಿಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕ್ರೋಶ ವ್ಯಕ್ತಪಡಿಸಿರುವ ಕೆಲವು ಟ್ವೀಟ್ ಸರಣಿ ಈಗಿವೆ.
ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು. ಶ್ರದ್ಧೆ, ಭಕ್ತಿ ಹಾಗೂ ಧೈರ್ಯದ ಸಂಕೇತವಾದ ಹನುಮ ಜಯಂತಿಯಂದು ನಾಡಿನಲ್ಲಿ ಸದಾಕಾಲ ಸಮೃದ್ಧಿ ಹಾಗೂ ಸಂತಸ ತುಂಬಿರಲಿ, ಭಗವಂತನ ಆಶೀರ್ವಾದ ನಾಡಿನ ಎಲ್ಲ ಜನರ ಮೇಲಿರಲಿ ಎಂದು ಹಾರೈಸುತ್ತೇನೆ.
— Siddaramaiah (@siddaramaiah) March 31, 2018
ವಾವ್! ತುಂಬಾ ಧನ್ಯವಾದಗಳು.
— Mahadev (@Mahadev42749715) March 31, 2018
Election game ತುಂಬಾ ಚೆನ್ನಾಗಿದೆ.
ಹನುಮ ಜಯಂತಿ ಮಾಡಲು ಬಿಡದವರಿಂದ ಶುಭಾಶಯಗಳು. ಇದು ಹಿಂದುಗಳಿಗೆ ಅಲ್ಲ ಬರಿ ಓಲೈಕೆದಾರರಿಗೆ ಮಾತ್ರವೇ ನಿಮ್ಮ ಶುಭಾಶಯ
— Mallangouda Gangapur (@MallanagoudaG) March 31, 2018
ಈ ನಡುವೆ ಸ್ವತಃ ಮುಖ್ಯಮಂತ್ರಿಯವರೆ ಈ ಬಗ್ಗೆ ಪ್ರತಿಕ್ರಯಿಸಿ ' ನಾವು ಯಾವ ಜಯಂತಿಯನ್ನು ವಿರೋಧಿಸುವುದಿಲ್ಲ. ಆದರೆ ಹಬ್ಬದ ಹೆಸರಿನಲ್ಲಿ ಗಲಭೆ ಉಂಟು ಮಾಡುವವರನ್ನು ನಾವು ಸಹಿಸುವುದಿಲ್ಲ' ಎಂದಿದ್ದಾರೆ.