Asianet Suvarna News Asianet Suvarna News

ತಂತ್ರಜ್ಞಾನ ಮುಂದೆ ಹೋಗುತ್ತಿದೆ: ದಿಲ್ಲಿ ಸಿಎಂ'ಗೆ ಹಳೆಯ ವಿಧಾನವೇ ಬೇಕಂತೆ

ಇತ್ತೀಚಿಗಷ್ಟೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯವತಿ ಕೂಡ ತಮ್ಮ ಪಕ್ಷದ ಸೋಲಿಗೆ ವಿದ್ಯುನ್ಮಾನ ಮತಯಂತ್ರಗಳೆ ಕಾರಣ ಎಂದು ಆರೋಪಿಸಿ ಮರು ಚುನಾವಣೆ ನಡೆಸುವಂತೆ ಆಗ್ರಹಿಸಿದ್ದರು.

CM Arvind Kejriwal to Election Commission

ನವದೆಹಲಿ(ಮಾ.14): ಎಲ್ಲರೂ ಆಧುನಿಕ ತಂತ್ರಜ್ಞಾನದ ಮೊರೆ ಹೋಗುತ್ತಿದ್ದರೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತ್ರ ಹಳೆಯ ವಿಧಾನ ಬೇಕೆಂದು ಬಡಾಯಿಸುತ್ತಿದ್ದಾರೆ.

ಅವರು ಹಳೆಯ ವಿಧಾನ ಬೇಕೆಂದು ಕೇಳುತ್ತಿರುವುದು ತನ್ನ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದಲ್ಲ. ರಾಜಕೀಯ ಕಾರಣಗಳಿಂದ. ಮುಂದಿನ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ದೆಹಲಿ ಪಾಲಿಕೆ ಚುನಾವಣೆಯಲ್ಲಿ ವಿದ್ಯುನ್ಮಾನ ಯಂತ್ರಗಳ ಬದಲಿಗೆ ಬ್ಯಾಲೆಟ್ ಪತ್ರಗಳನ್ನು ಒದಗಿಸುವಂತೆ ರಾಜ್ಯ ಚುನಾವಣಾ ಆಯೋಗದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದಾರೆ.

ಇತ್ತೀಚಿಗಷ್ಟೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯವತಿ ಕೂಡ ತಮ್ಮ ಪಕ್ಷದ ಸೋಲಿಗೆ ವಿದ್ಯುನ್ಮಾನ ಮತಯಂತ್ರಗಳೆ ಕಾರಣ ಎಂದು ಆರೋಪಿಸಿ ಮರು ಚುನಾವಣೆ ನಡೆಸುವಂತೆ ಆಗ್ರಹಿಸಿದ್ದರು.

Latest Videos
Follow Us:
Download App:
  • android
  • ios