* ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ* ಚಿಂತಾಮಣಿ ನಗರಸಭೆ ಆಯುಕ್ತರ ಅಮಾನತು* ಡಿಸಿ ದೀಪ್ತಿ ಆದಿತ್ಯಾ ಕಾನಡೆಯಿಂದ ಅಮಾನತು ಆದೇಶ* ಚಿಂತಾಮಣಿ ನಗರಸಭೆ ಆಯುಕ್ತ ಮುನಿಶಾಮಿ* ಪ್ರಭಾರ ಆಯುಕ್ತರಾಗಿ ಎನ್.ಭಾಸ್ಕರ್ ನೇಮಕ

ಚಿಕ್ಕಬಳ್ಳಾಪುರ(ಆ. 30): ಲೈಂಗಿಕ ಕಿರುಕುಳ ಆರೋಪದಡಿ ಚಿಂತಾಮಣಿ ನಗರಸಭೆ ಆಯುಕ್ತರನ್ನು ಅಮಾನತುಗೊಳಿಸಲಾಗಿದೆ. ಜಿಲ್ಲಾಧಿಕಾರಿ ದೀಪ್ತಿ ಆದಿತ್ಯಾ ಕಾನಡೆ ಅವರು ನಗರಸಭೆ ಆಯುಕ್ತರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಿಂತಾಮಣಿ ನಗರಸಭೆ ಆಯುಕ್ತ ಮುನಿಶಾಮಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆಂದು ಮಹಿಳಾ ಸಿಬ್ಬಂದಿಯೊಬ್ಬರು ದೂರು ನೀಡಿದ್ದರು. ಈ ದೂರಿನ ಅನ್ವಯ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ, ಆಯುಕ್ತ ಮುನಿಶಾಮಿ ಅವರನ್ನು ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.

ಈ ವೇಳೆ, ಜಿಲ್ಲಾ ಯೋಜನಾ ನಿರ್ದೇಶಕರಾದ ಎನ್. ಭಾಸ್ಕರ್ ಅವರನ್ನು ಚಿಂತಾಮಣಿಯ ಪ್ರಭಾರ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.