ನೋಟು ನಿಷೇಧ ಮಾಡಿ ಇಂದಿಗೆ 50 ದಿನಗಳು ಕಳೆದಿವೆ. ಪ್ರಧಾನಿ ಹೇಳಿದಂತೆ ಯಾವ ಬದಲಾವಣೆಯೂ ಆಗಿಲ್ಲ; ರೈತರು, ಜನಸಾಮಾನ್ಯರು ನರಳುತ್ತಿದ್ದಾರೆ ಎಂದು ಚಿದಂಬರಂ ಹೇಳಿದ್ದಾರೆ.

ನವದೆಹಲಿ (ಡಿ.30): ಕೇಂದ್ರ ಸರ್ಕಾರ ಕೈಗೊಂಡಿರುವ ನೋಟು ನಿಷೇಧ ಕ್ರಮ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರ್ಥಿಕ ತಜ್ಞ ಹಾಗೂ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನೋಟು ನಿಷೇಧ ಮಾಡಿ ಇಂದಿಗೆ 50 ದಿನಗಳು ಕಳೆದಿವೆ. ಪ್ರಧಾನಿ ಹೇಳಿದಂತೆ ಯಾವ ಬದಲಾವಣೆಯೂ ಆಗಿಲ್ಲ; ರೈತರು, ಜನಸಾಮಾನ್ಯರು ನರಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ನೋಟು ಅಮಾನ್ಯ ಮಾಡುವ ಕ್ರಮವು ರಾಜಕೀಯ ಉದ್ದೇಶದಿಂದ ತೆಗೆದುಕೊಂಡ ನಿರ್ಧಾರವಾಗಿದೆ ಎಂದಿರುವ ಚಿದಂಬರಂ, ಪ್ರಧಾನಿ ಮೋದಿ ದೇಶದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.