ಕೇಂದ್ರ ಸಚಿವ ಅನಂತ ಕುಮಾರ್​ ಹೆಗಡೆ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಕಿಡಿ ನಿಮ್ಮದು ಅಭಿವೃದ್ಧಿಯೋ? ಉಗ್ರ ಹಿಂದುತ್ವ ಭಾಷಣವೋ? ಎಂದು ಅನಂತ್ ಕುಮಾರ್ ಹೆಗಡೆ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಗರಂ ಆಗಿದ್ದಾರೆ.

ಬೆಂಗಳೂರು (ಡಿ.28): ಕೇಂದ್ರ ಸಚಿವ ಅನಂತ ಕುಮಾರ್​ ಹೆಗಡೆ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಕಿಡಿ ನಿಮ್ಮದು ಅಭಿವೃದ್ಧಿಯೋ? ಉಗ್ರ ಹಿಂದುತ್ವ ಭಾಷಣವೋ? ಎಂದು ಅನಂತ್ ಕುಮಾರ್ ಹೆಗಡೆ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಗರಂ ಆಗಿದ್ದಾರೆ.

ಐದಾರು ಬಾರಿ ಗೆದ್ದರೂ ಒಂದು ಪೈಸೆಯೂ ಏಳಿಗೆ ಮಾಡಿಲ್ಲ. ಪ್ರವಾಸೋದ್ಯಮಕ್ಕೆ ಹಲವು ಅವಕಾಶವಿದ್ದರೂ ಅಭಿವೃದ್ಧಿ ಮಾಡಿಲ್ಲ. ಏಳಿಗೆ ಮಾಡದವರೂ ಎಷ್ಟು ಬಾರಿ ಆಯ್ಕೆಯಾದರೂ ವ್ಯರ್ಥ. ಅಪಕ್ವ ಸೇವೆ ಅಹಂಕಾರದ ವೈಭವ ಎಂದು ನೆಲದ ಮಾತು ಬ್ಲಾಗ್​'ನಲ್ಲಿ ಪರೋಕ್ಷವಾಗಿ ಟಾಂಗ್​ ನೀಡಿದ್ದಾರೆ.