ಹಜ್‌ ಯಾತ್ರಿಕರಿಗೆ ಕೇಂದ್ರ ಸರ್ಕಾರ ಶಾಕ್​​ ಕೊಟ್ಟಿದೆ.  ಹಜ್​ ಯಾತ್ರೆಗೆ ಸಂಬಂಧಿಸಿದ ಕರಡು ನೀತಿ ಸಿದ್ಧವಾಗಿದೆ. ಯಾತ್ರಿಕರಿಗೆ ನೀಡುವ ಸಹಾಯಧವನ್ನು ರದ್ದುಪಡಿಸುವ ಪ್ರಸ್ತಾವನೆ ಮಾಡಲಾಗಿದೆ.  

ನವದೆಹಲಿ (ಅ.09): ಹಜ್‌ ಯಾತ್ರಿಕರಿಗೆ ಕೇಂದ್ರ ಸರ್ಕಾರ ಶಾಕ್​​ ಕೊಟ್ಟಿದೆ. ಹಜ್​ ಯಾತ್ರೆಗೆ ಸಂಬಂಧಿಸಿದ ಕರಡು ನೀತಿ ಸಿದ್ಧವಾಗಿದೆ. ಯಾತ್ರಿಕರಿಗೆ ನೀಡುವ ಸಹಾಯಧವನ್ನು ರದ್ದುಪಡಿಸುವ ಪ್ರಸ್ತಾವನೆ ಮಾಡಲಾಗಿದೆ.

ಹಜ್‌ ಸಹಾಯಧನ ರದ್ದತಿಯಿಂದ ಉಳಿಯುವ ಹಣ ಮುಸ್ಲಿಮರ ಶಿಕ್ಷಣಕ್ಕೆ ಬಳಕೆಯಾಗಲಿದೆ. ಜತೆಗೆ 45 ಕ್ಕಿಂತ ಹೆಚ್ಚು ವರ್ಷ ವಯಸ್ಸಾಗಿರುವ ಮಹಿಳೆಯರು, ಪುರುಷರ ಜತೆ ಇಲ್ಲದೆ ಕನಿಷ್ಠ 4 ಮಂದಿಯ ಗುಂಪಿನಲ್ಲಿ ಹೋಗುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೇಂದ್ರದ ಮಾಜಿ ಕಾರ್ಯದರ್ಶಿ ಅಫ್ಜಲ್‌ ಅಮಾನುಲ್ಲಾ ಅವರ ನೇತೃತ್ವದ ಸಮಿತಿಯು 2018-2022 ರ ಅವಧಿಯ ಹಜ್‌ ನೀತಿಯ ಕರಡನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ. 2018ರ ಹಜ್‌ ಯಾತ್ರೆಯು ಹೊಸ ನೀತಿಗೆ ಅನುಗುಣವಾಗಿ ಇರುತ್ತದೆ. ಸಚಿವಾಲಯವು ಕರಡು ನೀತಿಯ ಪರಿಶೀಲನೆ ನಡೆಸಿದ ಬಳಿಕ ಸಂಬಂಧಪಟ್ಟ ಎಲ್ಲರ ಜತೆಯೂ ಚರ್ಚಿಸಲಾಗುವುದು ಎಂದು ಸಚಿವಾಲಯದ ಮೂಲಗಳು ಹೇಳಿವೆ.