ಹಣಕಾಸು ವರ್ಷವನ್ನು (ಏ.1ರಿಂದ ಮಾ.31) ಕೂಡಾ ಕ್ಯಾಲೆಂ ಡರ್‌ ವರ್ಷಕ್ಕೆ (ಜ.1ರಿಂದ ಡಿ.31) ಅನುಗುಣವಾಗಿ ಬದಲಾಯಿಸಬೇಕೆಂಬ ದಶಕಗಳ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿದ್ದು, 2018 ರಿಂದಲೇ ಹೊಸ ನಿಯಮ ಜಾರಿಗೆ ನಿರ್ಧ ರಿಸಿದೆ ಎಂದು ಮೂಲಗಳು ತಿಳಿಸಿವೆ. ಹೀಗಾದಲ್ಲಿ 2018ನೇ ಸಾಲಿನ ಬಜೆಟ್‌ ಮುಂದಿನ ನವೆಂಬರ್‌ನಲ್ಲಿಯೇ ಮಂಡನೆಯಾಗಲಿದೆ. ಅಂದರೆ ಇನ್ನು 4 ತಿಂಗಳಲ್ಲಿ ಕೇಂದ್ರ ಇನ್ನೊಂದು ಬಜೆಟ್‌ ಮಂಡಿಸಲಿದೆ. ದೇಶದ ಒಟ್ಟು ಆರ್ಥಿಕ ಉತ್ಪನ್ನ (ಜಿಡಿಪಿ)ದಲ್ಲಿ ಶೇ.15ಕ್ಕಿಂತ ಹೆಚ್ಚಿನ ಪಾಲು ಕೃಷಿ ವಲಯದ್ದು. ಜೊತೆಗೆ ದೇಶದ ಗ್ರಾಮೀಣ ಪ್ರದೇಶಗಳ ಶೇ.58ರಷ್ಟುಕುಟುಂಬಗಳ ಮುಖ್ಯ ಆದಾಯ ಕೃಷಿ.
ನವದೆಹಲಿ(ಜೂ.27): ಹಣಕಾಸು ವರ್ಷವನ್ನು (ಏ.1ರಿಂದ ಮಾ.31) ಕೂಡಾ ಕ್ಯಾಲೆಂ ಡರ್ ವರ್ಷಕ್ಕೆ (ಜ.1ರಿಂದ ಡಿ.31) ಅನುಗುಣವಾಗಿ ಬದಲಾಯಿಸಬೇಕೆಂಬ ದಶಕಗಳ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿದ್ದು, 2018 ರಿಂದಲೇ ಹೊಸ ನಿಯಮ ಜಾರಿಗೆ ನಿರ್ಧ ರಿಸಿದೆ ಎಂದು ಮೂಲಗಳು ತಿಳಿಸಿವೆ. ಹೀಗಾದಲ್ಲಿ 2018ನೇ ಸಾಲಿನ ಬಜೆಟ್ ಮುಂದಿನ ನವೆಂಬರ್ನಲ್ಲಿಯೇ ಮಂಡನೆಯಾಗಲಿದೆ. ಅಂದರೆ ಇನ್ನು 4 ತಿಂಗಳಲ್ಲಿ ಕೇಂದ್ರ ಇನ್ನೊಂದು ಬಜೆಟ್ ಮಂಡಿಸಲಿದೆ. ದೇಶದ ಒಟ್ಟು ಆರ್ಥಿಕ ಉತ್ಪನ್ನ (ಜಿಡಿಪಿ)ದಲ್ಲಿ ಶೇ.15ಕ್ಕಿಂತ ಹೆಚ್ಚಿನ ಪಾಲು ಕೃಷಿ ವಲಯದ್ದು. ಜೊತೆಗೆ ದೇಶದ ಗ್ರಾಮೀಣ ಪ್ರದೇಶಗಳ ಶೇ.58ರಷ್ಟುಕುಟುಂಬಗಳ ಮುಖ್ಯ ಆದಾಯ ಕೃಷಿ.
ಆದರೆ ಪ್ರತಿ ವರ್ಷ ಕೃಷಿ ಚಟುವಟಿಕೆ ಆರಂಭವಾಗುವಷ್ಟರಲ್ಲಿ ಬಜೆಟ್ ಪ್ರಕ್ರಿಯೆ ಮುಗಿದು ಹೋಗಿರುತ್ತದೆ. ಒಂದು ವೇಳೆ ಸೂಕ್ತ ಮುಂಗಾರು ಸುರಿಯದೇ ಬರ ಎದುರಾದಲ್ಲಿ ಕೃಷಿಕರಿಗೆ ಸೂಕ್ತ ಪರಿಹಾರ ಕಲ್ಪಿಸಲು ಸರ್ಕಾರಗಳಿಗೆ ಸಾಧ್ಯವಾಗದು. ಹೀಗಾಗಿ ಹಣಕಾಸು ವರ್ಷವನ್ನು ಮುಂಗಾರು ಸೈಕಲ್ಗೆ ಅನುಗುಣವಾಗಿ ಇಡಬೇಕೆಂದು ಹಲವು ವರ್ಷಗಳಿಂದ ಬೇಡಿಕೆ ಇಡಲಾಗಿತ್ತು.
