ಸ್ವಾತಂತ್ರ್ಯ ನಂತರ ದೇಶದಲ್ಲಿ ಜಾರಿಗೆ ತಂದ ಅತೀ ದೊಡ್ಡ ತೆರಿಗೆ ಸುಧಾರಣೆ ಎಂಬ ಬಣ್ಣನೆಗೆ ಪಾತ್ರವಾಗಿರುವ ಜಿಎಸ್‌ಟಿ ವ್ಯವಸ್ಥೆಗೆ ಮಧ್ಯ ರಾತ್ರಿ ಚಾಲನೆ ದೊರೆತಿದೆ. ಈ ಹಿನ್ನೆಲೆ ದೇಶದ ವಿವಿಧೆಡೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸುವುದರ ಮೂಲಕ ಸಂಭ್ರಮಿಸಿದರು. ಈ ಕುರಿತು ಒಂದು ವರದಿ ಇಲ್ಲಿದೆ.

ನವದೆಹಲಿ(ಜು.01): ಸ್ವಾತಂತ್ರ್ಯ ನಂತರ ದೇಶದಲ್ಲಿ ಜಾರಿಗೆ ತಂದ ಅತೀ ದೊಡ್ಡ ತೆರಿಗೆ ಸುಧಾರಣೆ ಎಂಬ ಬಣ್ಣನೆಗೆ ಪಾತ್ರವಾಗಿರುವ ಜಿಎಸ್‌ಟಿ ವ್ಯವಸ್ಥೆಗೆ ಮಧ್ಯ ರಾತ್ರಿ ಚಾಲನೆ ದೊರೆತಿದೆ. ಈ ಹಿನ್ನೆಲೆ ದೇಶದ ವಿವಿಧೆಡೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸುವುದರ ಮೂಲಕ ಸಂಭ್ರಮಿಸಿದರು. ಈ ಕುರಿತು ಒಂದು ವರದಿ ಇಲ್ಲಿದೆ.

ಆರ್ಥಿಕ ಮಹಾಕ್ರಾಂತಿ ಜಾರಿಗೆ ತರುವ ಮೂಲಕ ಒಂದು ರಾಷ್ಟ್ರ, ಒಂದು ತೆರಿಗೆ ಪರಿಕಲ್ಪನೆಯ ಯುಗಾರಂಭವಾಗಿದೆ. ಈ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣವ್‌ ಮುಖರ್ಜಿ, ಉಪ ರಾಷ್ಟ್ರಪತಿ ಅಮಿದ್‌ ಅನ್ಸಾರಿ ಸೇರಿದಂತೆ ಗಣ್ಯರು, ಭಾರತೀಯರು ಸಾಕ್ಷಿಯಾದರು. ಐತಿಹಾಸಿಕ ಕ್ಷಣಕ್ಕಾಗಿ ಸಂಸತ್​ ಭವನ ವಿದ್ಯುತ್​ ದೀಪಗಳಿಂದ ಕಂಗೊಳಿಸಿದ್ದು ವಿಶೇಷವಾಗಿತ್ತು.

ಇನ್ನು ಏಕ ರೂಪ ಏಕ ತೆರಿಗೆ ಜಾರಿಯಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸುವುದರ ಮೂಲಕ ಸಂಭ್ರಮಿಸಿದರು. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಸಂಸತ್​ ಭವನ, ಇಂಡಿಯಾ ಗೇಟ್​ ಸೇರಿದಂತೆ ಬಿಜೆಪಿ ಕಚೇರಿ ಎದುರು ಕಾರ್ಯಕರ್ತರು ಕುಣಿದು ಕುಪ್ಪಳಿಸುವ ಮೂಲಕ ಜಿಎಸ್ಟಿ​ ಸ್ವಾಗತಿಸಿದರು.

ಇತ್ತ ಉತ್ತರ ಪ್ರದೇಶದ ವಾರಣಾಸಿಯಲ್ಲೂ ಕೂಡ ವಾಣಿಜ್ಯೋದ್ಯಮಿಗಳು ಮೆರವಣಿಗೆ ಮಾಡುವ ಮೂಲಕ ಜಿಎಸ್​ಟಿಗೆ ಬೆಂಬಲ ಸೂಚಿಸಿದರು. ಭೂಪಾಲ್'​ನಲ್ಲೂ ಕೂಡ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿತ್ತು. ಮೋದಿ ಪರ ಘೋಷಣೆ ಕೂಗೋದ್ರ ಮೂಲಕ ಜಿಎಸ್​ಟಿ ಸ್ವಾಗತಿಸಿದರು

ಒಟ್ಟಿನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಕ್ರಿಕೆಟ್​ ವಲ್ಡ್​ಕಪ್ ಗೆದ್ದಿದ್ದಕ್ಕಿಂತ ಹೆಚ್ಚು ಸಂಭ್ರಮ ಪ್ರಧಾನಿ ಮೋದಿ ಜಿಎಸ್ಟಿ ಜಾರಿಗೆ ತಂದ ಕ್ಷಣದಲ್ಲಿ ಕಂಡಿತು.