ನಲಪಾಡ್ ಪ್ಲಾನ್’ಗೆ ಸಿಸಿಬಿ ಮಾಸ್ಟರ್ ಪ್ಲಾನ್; ಸುಪ್ರೀಂಕೋರ್ಟ್’ನಲ್ಲಿ ಜಾಮೀನು ಸಿಗುತ್ತಾ?
ನಲಪಾಡ್ ಅಂಡ್ ಗ್ಯಾಂಗ್’ಗೆ ಸಂಕಟ ಇನ್ನೂ ತಪ್ಪಿಲ್ಲ. ಸುಪ್ರೀಂ ಕೋರ್ಟ್’ನಲ್ಲಿಯೂ ಜಾಮೀನು ಮಂಜೂರು ಮಾಡದಂತೆ ಸಿಸಿಬಿ ಪ್ಲಾನ್ ಮಾಡಿದೆ. ಸುಪ್ರೀಂ ಕೋರ್ಟ್ ನಲ್ಲಿ ಮಧ್ಯಂತರ ಆದೇಶ ನೀಡುವ ಮೊದಲು ಸಿಸಿಬಿ ಅಭಿಪ್ರಾಯ ಕೇಳಿ ಎಂದು ಸುಪ್ರೀಂ ಕೋರ್ಟ್’ಗೆ ಸಿಸಿಬಿ ಅಧಿಕಾರಿಗಳು ಕೆವಿಯಟ್ ಸಲ್ಲಿಸಿದ್ದಾರೆ.
ಬೆಂಗಳೂರು (ಮಾ. 17): ನಲಪಾಡ್ ಅಂಡ್ ಗ್ಯಾಂಗ್’ಗೆ ಸಂಕಟ ಇನ್ನೂ ತಪ್ಪಿಲ್ಲ. ಸುಪ್ರೀಂ ಕೋರ್ಟ್’ನಲ್ಲಿಯೂ ಜಾಮೀನು ಮಂಜೂರು ಮಾಡದಂತೆ ಸಿಸಿಬಿ ಪ್ಲಾನ್ ಮಾಡಿದೆ. ಸುಪ್ರೀಂ ಕೋರ್ಟ್ ನಲ್ಲಿ ಮಧ್ಯಂತರ ಆದೇಶ ನೀಡುವ ಮೊದಲು ಸಿಸಿಬಿ ಅಭಿಪ್ರಾಯ ಕೇಳಿ ಎಂದು ಸುಪ್ರೀಂ ಕೋರ್ಟ್’ಗೆ ಸಿಸಿಬಿ ಅಧಿಕಾರಿಗಳು ಕೆವಿಯಟ್ ಸಲ್ಲಿಸಿದ್ದಾರೆ.
ನಲ್ಪಾಡ್ ಅಂಡ್ ಗ್ಯಾಂಗ್ ಸುಪ್ರೀಂಕೋರ್ಟ್’ಗೆ ಜಾಮೀನು ಅರ್ಜಿ ಸಲ್ಲಿಸಲು ತಯಾರಿ ನಡೆಸಿದೆ. ಅರ್ಜಿ ಸಲ್ಲಿಸಲು ತಯಾರಿ ನಡೆಸಿದ ಮುನ್ಸೂಚನೆ ಅರಿತ ಸಿಸಿಬಿ ಕೆವಿಯಟ್ ಅರ್ಜಿ ಸಲ್ಲಿಸಿದೆ. ಮಧ್ಯಂತರ ಜಾಮೀನು ಮಂಜೂರು ಮಾಡುವ ಮೊದಲು ನಮ್ಮ ವಾದವನ್ನು ಆಲಿಸಿ ಎಂದು ಸಿಸಿಬಿ ಹೇಳಿದೆ.