ಅಕ್ರಮ ಡಿನೋಟಿಫಿಕೇಷನ್ ಪ್ರಕರಣ ಸಂಬಂಧ ಎಸಿಬಿ ಎಫ್'ಐಆರ್ ದಾಖಲಿಸಿ ಬಿಎಸ್'ವೈ ಗೆ ಬಿಗ್ ಶಾಕ್ ನೀಡಿದೆ. ಹೀಗಾಗಿ ಬಂಧನ ಭೀತಿಯಿಂದ ತಪ್ಪಿಸ್ಸಿಕೋಳ್ಳಲು ಬಿಎಸ್ ಯಡಿಯೂರಪ್ಪ ಸೈಲೆಂಟಾಗಿ ಕಾನೂನು ತಂತ್ರವನ್ನ ಹೆಣೆಯುತ್ತಿದ್ದಾರೆ. ಎಸಿಬಿ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ಬೆಂಗಳೂರು(ಆ.21): ಡಿನೋಟಿಪೀಕೇಶನ್ ಕೇಸ್ ರೀಓಪನ್ ಮಾಡಿ ಎಸಿಬಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರ ಮೇಲೆ ಎಫ್ಐಆರ್ ದಾಖಲಿಸಿದೆ. ಹೀಗಾಗಿ ಬಿಎಸ್ವೈ ಸದ್ಯ ಬಂಧನದ ಭೀತಿಯಲ್ಲಿದ್ದು ಲೋಕಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಹಾಗೆಯೇ ಎಸಿಬಿ ವಿರುದ್ಧ ಕಾನೂನು ಸಮರ ನಡೆಸಲು ಮುಂದಾಗಿದ್ದಾರೆ.
ಎಸಿಬಿ ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ಸಲ್ಲಿಸಿರುವ ಅರ್ಜಿ ಇಂದು ನ್ಯಾಯಲಯಕ್ಕೆ ಬರಲಿದೆ. ಹೀಗಾಗಿ ಬಿಎಸ್ ವೈ ಇಂದು ಲೋಕಾಯುಕ್ತ ವಿಶೇಷ ನ್ಯಾಯಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಎಲ್ಲಾ ಸಿದ್ಧತೆ ನಡೆಸಿದ್ದಾರೆ. ಪ್ರಕರಣದ ಉಳಿದ ಆರೋಪಿಗಳಾದ ಬಸವರಾಜೇಂದ್ರ, ಪ್ರೇಮಚಂದ್ರ, ಗೌರಿಶಂಕರ್, ಸುಬೀರ್ ಹರಿಸಿಂಗ್ ಕೂಡ ಇಂದು ಸಂಜೆ ನೀರಿಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಬಸವರಾಜೇಂದ್ರ ಆರೋಪ ಮಾಡಿರೋದ್ರಿಂದ ಎಸಿಬಿ ಅಧಿಕಾರಿಗಳು ಸಹ ಪ್ರಕರಣವನ್ನ ಗಂಭಿರವಾಗಿ ಪರಿಗಣಿಸಿದ್ದಾರೆ. ಪ್ರಕರಣ ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಲು ಮುಂದಾಗಿದ್ದಾರೆ.
