ಮನವಿ ಸ್ವೀಕರಿಸುವ ವೇಳೆ ಎಡವಿ ಬಿದ್ದ ಬಿಎಸ್’ವೈ
ಮನೆಯಿಂದ ಹೊರಗೆ ಬಂದು ಸಾರ್ವಜನಿಕರಿಂದ ಮನವಿ ಸ್ವೀಕರಿಸುವಾಗ ಯಡಿಯೂರಪ್ಪ ಎಡವಿ ಬಿದ್ದಿದ್ದಾರೆ. ಮನೆ ಮುಂದಿನ ಮೆಟ್ಟಿಲು ಇಳಿಯುವಾಗ ಕಾಲು ಎಡವಿ ಬಿದ್ದಿದ್ದಾರೆ.
ಬೆಂಗಳೂರು (ಮಾ. 29): ಮನೆಯಿಂದ ಹೊರಗೆ ಬಂದು ಸಾರ್ವಜನಿಕರಿಂದ ಮನವಿ ಸ್ವೀಕರಿಸುವಾಗ ಯಡಿಯೂರಪ್ಪ ಎಡವಿ ಬಿದ್ದಿದ್ದಾರೆ. ಮನೆ ಮುಂದಿನ ಮೆಟ್ಟಿಲು ಇಳಿಯುವಾಗ ಕಾಲು ಎಡವಿ ಬಿದ್ದಿದ್ದಾರೆ.
ರೈಲ್ವೇ ಉದ್ಯೋಗ ವಂಚಿತರಿಂದ ಮನವಿ ಸ್ವೀಕರಿಸುವ ವೇಳೆ ಎಡವಿ ಬಿದ್ದಿದ್ದಾರೆ. ಈ ವೇಳೆ ಉದ್ಯೋಗ ವಂಚಿತರಿಗೆ ಗದರಿದ್ದಾರೆ. ದೇಶದಲ್ಲಿ ಏನು ಪಾಲಿಸಿ ಇದೆಯೋ ಕರ್ನಾಟಕಕ್ಕೂ ಅದೇ ಆಗುತ್ತದೆ ಎಂದಿದ್ದಾರೆ. ಇಷ್ಟಾದರೂ ನಮಗೆ ನ್ಯಾಯ ಕೊಡಿಸಿ. ಪಿಯುಷ್ ಗೋಯೆಲ್ ಬಳಿ ಮಾತಾಡಿ ಎಂದು ನಿರುದ್ಯೋಗಿಗಳು ಮನವಿ ಮಾಡಿಕೊಂಡಿದ್ದಾರೆ. ಆಗ ಮನವಿ ಸ್ವೀಕರಿಸಿ ಕಾರು ಹತ್ತಲು ಆಗಮಿಸುವಾಗ ಎಡವಿದ್ದಾರೆ. ತಕ್ಷಣ ಪಕ್ಕದಲ್ಲಿದ್ದ ವ್ಯಕ್ತಿ ತಡೆದು ನಿಲ್ಲಿಸಿದ್ದಾರೆ.