ಜಮ್ಮು-ಕಾಶ್ಮೀರ ಗಡಿಯಲ್ಲಿ ಕಳೆದ ಕೆಲವು ದಿನಗಳಿಂದ ಉಪಟಳ ನೀಡುತ್ತಿರುವ ಪಾಕ್ ಯೋಧರು ಪದೇ ಪದೇ ಗುಂಡಿನ ದಾಳಿ ನಡೆಸುತ್ತಿದ್ದರು ಎನ್ನಲಾಗಿದ್ದು, ಪಾಕ್ ಸೇನೆ ಪುಂಡಾಟಿಕೆಗೆ ತಕ್ಕ ಉತ್ತರ ನೀಡಿದ ಬಿಎಸ್ಎಫ್ 15 ಮಂದಿ ಪಾಕ್ ಯೋಧರನ್ನು ಹೊಡೆದು ಉರುಳಿಸಿದೆ.
ಶ್ರೀನಗರ(ಅ.28): ಗಡಿಯಲ್ಲಿ ಪಾಕ್ ಸೇನೆ ಪುಂಡಾಟಿಕೆ ಹೆಚ್ಚಾದ ಹಿನ್ನಲೆಯಲ್ಲಿ ತಕ್ಕ ಉತ್ತರ ನೀಡುವ ಸಲುವಾಗಿ ನಡೆದ ಕಾರ್ಯಚರಣೆಯಲ್ಲಿ ಬಿಎಸ್ಎಫ್ ಯೋಧರು 15 ಮಂದಿ ಪಾಕ್ ಸೈನಿಕರನ್ನು ಹತ್ಯೆ ಮಾಡಿದ್ದಾರೆ.
ಜಮ್ಮು-ಕಾಶ್ಮೀರ ಗಡಿಯಲ್ಲಿ ಕಳೆದ ಕೆಲವು ದಿನಗಳಿಂದ ಉಪಟಳ ನೀಡುತ್ತಿರುವ ಪಾಕ್ ಯೋಧರು ಪದೇ ಪದೇ ಗುಂಡಿನ ದಾಳಿ ನಡೆಸುತ್ತಿದ್ದರು ಎನ್ನಲಾಗಿದ್ದು, ಪಾಕ್ ಸೇನೆ ಪುಂಡಾಟಿಕೆಗೆ ತಕ್ಕ ಉತ್ತರ ನೀಡಿದ ಬಿಎಸ್ಎಫ್ 15 ಮಂದಿ ಪಾಕ್ ಯೋಧರನ್ನು ಹೊಡೆದು ಉರುಳಿಸಿದೆ.
ಗಡಿಯಲ್ಲಿ ಪಾಕ್ನಿಂದ ಫೈರಿಂಗ್ ಹಿನ್ನೆಲೆಯಲ್ಲಿ, ಪಾಕ್ ದಾಳಿಗೆ ಪ್ರತಿಯಾಗಿ ಭಾರತೀಯ ಯೋಧರಿಂದಲೂ ದಾಳಿ ನಡೆದಿದೆ ಎನ್ನಲಾಗಿದ್ದು, ಈ ಸಂಧರ್ಭದಲ್ಲಿ ಭಾರತೀಯ ಪಡೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.
