ಬಿಎಸ್’ವೈ ಎಂ.ಬಿ. ಪಾಟೀಲ್ ಟ್ವಿಟರ್ ವಾರ್

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪರ ‘ರೈತರ ಪಾಲಿಗೆ ನೀರಾವರಿ ಸಚಿವರು ಬದುಕಿದ್ದೂ ಸತ್ತಂತಾಗಿದೆ‌’ ಎಂಬ ಟೀಕೆಗೆ ನೀರಾವರಿ ಸಚಿವ ಎಂ.ಬಿ.ಪಾಟೀಲ್ ತಿರುಗೇಟು ನೀಡಿದ್ದಾರೆ.

ನನ್ನ ಕನಸಿನ ಯೋಜನೆಯಾದ ಕೆರೆ ತುಂಬುವ ಯೋಜನೆಯ ಪರಿಕಲ್ಪನೆ ಕಂಡು ತಾವು 2009 ರಲ್ಲಿ ಈ ಯೋಜನೆ ರಾಷ್ಟ್ರಕ್ಕೇ ಮಾದರಿ ಎಂದು ಹೇಳಿದ್ದು ನೆನಪಿಲ್ಲವೇ? ಹೀಗೇಕೆ ಸದಾ ಬಣ್ಣ ಬದಲಾಯಿಸುತ್ತೀರಿ? ಎಂದು ಎಂ.ಬಿ. ಪಾಟೀಲ್ ಟ್ವೀಟಿಸಿದ್ದಾರೆ.

Scroll to load tweet…

ಮುಂದುವರೆದು, ಹಿರಿಯರಾದ ನಿಮಗೆ ಅರಳು-ಮರಳು ಆಗುತ್ತಿದೆ. ನಾನು ನಿಮ್ಮ ಬಗ್ಗೆ ಮಾತನಾಡುವುದಿರಲಿ, ನಿಮ್ಮದೇ ಪಕ್ಷದವರು ನಿಮ್ಮ ಬಗ್ಗೆ ಹೇಳಿರುವುದನ್ನು ನೋಡಿ ಎಂದು ಸರಣಿ ಟ್ವೀಟ್’ಗಳನ್ನು ಮಾಡಿದ್ದಾರೆ..

Scroll to load tweet…
Scroll to load tweet…

ನಿನ್ನೆ ವಿಜಯಪುರದಲ್ಲಿ ಪರಿವರ್ತನಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ನೀರಾವರಿ ಸಚಿವ ಎಂ.ಬಿ. ಪಾಟೀಲರು ಈ ಭಾಗದವರೇ ಆಗಿದ್ದರೂ ಯೋಜನೆಯ ಬಗ್ಗೆ ಆಸಕ್ತಿ ತೋರಲಿಲ್ಲ. ರೈತರ ಪಾಲಿಗೆ ನೀರಾವರಿ ಸಚಿವರು ಬದುಕಿದ್ದೂ ಸತ್ತಂತಾಗಿದೆ‌. ಕೆಲಸ ಮಾಡುವುದು ಬಿಟ್ಟು ನನ್ನ ಹಗರಣ ಬಯಲು ಮಾಡುತ್ತೇನೆ ಎಂದು ಪೊಳ್ಳು ಸವಾಲು ಹಾಕಿಕೊಂಡು ಓಡಾಡುತ್ತಾರೆ, ಎಂದು ಟೀಕಿಸಿದ್ದರು.

Scroll to load tweet…