ಕೊಪ್ಪಳ(ಸೆ.20): ಹುಡುಗಿಯರನ್ನು ಚುಡಾಯಿಸುತ್ತಿದ್ದ ಯುವಕರಿಗೆ ಸಾರ್ವಜನಿಕರು ಸರಿಯಾಗಿಯೇ ಧರ್ಮದೇಟು ನೀಡಿದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ ದೇವರಾಜ ಅರಸ್ ಕಾಲೋನಿಯಲ್ಲಿ ಸೀಮಣ್ಣ, ನಾಗರಾಜ ಅಂಬ ಇಬ್ಬರು ಯುವಕರಿಗೆ ಸಾರ್ವಜನಿಕರು ಗೂಸ ನೀಡಿದ್ದಾರೆ. ಪ್ರೌಢ ಶಾಲೆಗೆ ಹೋಗುತ್ತಿದ್ದ ಹುಡುಗಿಯರನ್ನು ಈ ಇಬ್ಬರು ಯುವಕರು ಚುಡಾಯಿಸುತ್ತಿದ್ದರು ಎನ್ನುವ ಅರೋಪ ಕೇಳಿ ಬಂದಿದೆ.

ಇನ್ನು ಈ ಇಬ್ಬರು ಯುವಕರು ಸೀಮಣ್ಣ, ಕೊಪ್ಪಳ ತಾಲೂಕಿನ ಬೂದಿಹಾಳ ಗ್ರಾಮದವನಾಗಿದ್ದು, ನಾಗರಾಜ ಎಂಬಾತ ಕೊಪ್ಪಳದ ಸಜ್ಜೆಹೊಲ ನಿವಾಸಿ ಎನ್ನಲಾಗಿದೆ. ಸದ್ಯ ಸಾರ್ವಜನಿಕರು ಇಬ್ಬರು ಬೀದಿ ಕಾಮಣ್ಣರನ್ನು ಹಿಡಿದು ಗೂಸ ನೀಡಿ, ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.