ಶ್ರೀದೇವಿ ಚಿತಾಭಸ್ಮ ರಾಮೇಶ್ವರಂ ಕಡಲಲ್ಲಿ ವಿಸರ್ಜನೆ
ಫೆ.28ರಂದು ಮುಂಬೈನಲ್ಲಿ ಶ್ರೀದೇವಿ ಅವರ ಅಂತ್ಯಕ್ರಿಯೆ ನಡೆದಿತ್ತು.
ಚೆನ್ನೈ(ಮಾ.04): ಇತ್ತೀಚೆಗಷ್ಟೇ ಮೃತಪಟ್ಟಿದ್ದ ಬಾಲಿವುಡ್ ನಟಿ ಶ್ರೀದೇವಿ ಅವರ ಚಿತಾಭಸ್ಮವನ್ನು ಬಂಗಾಳಕೊಲ್ಲಿಯ ರಾಮೇಶ್ವರಂ ಕಡಲ ವಿಸರ್ಜಿಸಲಾಯಿತು.
ರಾಮೇಶ್ವರಂ ಕಡಲ ಕಿನಾರೆಯಲ್ಲಿ ಪತಿ ಬೋನಿ ಕಫೂರ್ ಹಾಗೂ ಪುತ್ರಿಯರಾದ ಜಾಹ್ನವಿ ಹಾಗೂ ಖುಷಿ ಈ ವಿಧಿವಿಧಾನಗಳನ್ನು ನೆರವೇರಿಸಿದರು. ಫೆಬ್ರವರಿ 24ರಂದು ದುಬೈನಲ್ಲಿ ಶ್ರೀದೇವಿ ಅನುಮಾಸ್ಪದವಾಗಿ ಮೃತಪಟ್ಟಿದ್ದರು.
ಫೆ.28ರಂದು ಮುಂಬೈನಲ್ಲಿ ಶ್ರೀದೇವಿ ಅವರ ಅಂತ್ಯಕ್ರಿಯೆ ನಡೆದಿತ್ತು.