ಮೋದಿ ಹೊಗಳಿದ ಅಮೀರ್: ಪ್ರಧಾನಿ ಪ್ರತ್ಯುತ್ತರವೂ ಸೂಪರ್!
ಪ್ರಧಾನಿ ಮೋದಿ ಅವರನ್ನು ಹಾಡಿ ಹೊಗಳಿದ ಅಮೀರ್ ಖಾನ್| ಮೋದಿ ಯೋಜನೆ ಕೇಳಿ ಸಂತಸಗೊಂಡ ಬಾಲಿವುಡ್ ನಟ| ಮೋದಿ ಅವರ ಜಲಶಕ್ತಿ ಅಭಿಯಾನಕ್ಕೆ ಅಮೀರ್ ಬೆಂಬಲ| ಪಾನಿ ಫೌಂಡೇಶನ್ ಮೂಲಕ ಮೋದಿ ಅಭಿಯನಕ್ಕೆ ಸಾಥ್ ನೀಡುವ ಭರವಸೆ| ಅಮೀರ್ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ ಪ್ರಧಾನಿ ಮೋದಿ|
ನವದೆಹಲಿ(ಜು.02): ಬಾಲಿವುಡ್ ನಟ ಅಮೀರ್ ಖಾನ್ ಪ್ರಧಾನಿ ನರೇಂದ್ರ ಮೋದಿ ಅವರ ಜಲಶಕ್ತಿ ಅಭಿಯನವನ್ನು ಕೊಂಡಾಡಿದ್ದು, ಪ್ರಧಾನಿ ಅವರ ಚಿಂತನೆ ದೂರದೃಷ್ಟಿಯಿಂದ ಕೂಡಿದೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
.@narendramodi Sir, the initiative taken up by you of making water the fundamental and primary issue for all of us is an extremely important step. Our wholehearted support is with you.#JanShakti4JalShakti@JalShaktiAbhyan https://t.co/pNjmKZ66Vb
— Aamir Khan (@aamir_khan) July 1, 2019
ಕೆಲ ದಿನಗಳ ಹಿಂದಷ್ಟೇ ತಮ್ಮ ಮೊದಲ ಮನ್ ಕಿ ಬಾತ್ನಲ್ಲಿ ನೀರಿನ ಸಂರಕ್ಷಣೆ ಕುರಿತು ಮಾತನಾಡಿದ್ದ ಪ್ರಧಾನಿ ಮೋದಿ, ಚೆನ್ನೈನಲ್ಲಿ ಉದ್ಭವಿಸಿರುವ ನೀರಿನ ಸಂಕಷ್ಟದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಅಲ್ಲದೇ ನೀರಿನ ಸಂರಕ್ಷಣೆಗಾಗಿ ಜಲಶಕ್ತಿ ಅಭಿಯಾನ ಆರಂಭಿಸುವುದಾಗಿ ತಿಳಿಸಿದ್ದರು.
ಮೋದಿ ಅವರ ಅಭಿಯಾನವನ್ನು ಮೆಚ್ಚಿಕೊಂಡಿರುವ ನಟ ಅಮೀರ್ ಖಾನ್, ಈ ಅಭಿಯಾನದಿಂದ ನಿಜಕ್ಕೂ ನೀರಿನ ಸಂರಕ್ಷಣೆಯಾಗಲಿದೆ ಎಂದು ಭರವಸೆ ವ್ಯಕ್ತಡಿಸಿದ್ದಾರೆ. ಅಮೀರ್ ಅವರ 'ಪಾನಿ ಫೌಂಡೇಶನ್' ಮಹರಾಷ್ಟ್ರದ ಬರಪೀಡಿತ ಪ್ರದೇಶಗಳಲ್ಲಿ ನೀರಿನ ಸಂರಕ್ಷಣೆಗಾಗಿ ಈಗಾಗಲೇ ಕೆಲಸ ನಿರ್ವಹಿಸುತ್ತಿದ್ದು, ಈ ಕಾರ್ಯದಲ್ಲಿ ತಾವು ಮೋದಿ ಅವರ ಸಾಥ್ ನೀಡುವುದಾಗಿ ಅಮೀರ್ ಟ್ವೀಟ್ ಮಾಡಿದ್ದಾರೆ.
Extremely valid points by @aamir_khan on the need to conserve water and create awareness at the grassroots level. #JanShakti4JalShakti https://t.co/Fs3Zd2AVYo
— Narendra Modi (@narendramodi) July 1, 2019
ಇನ್ನು ಅಮೀರ್ ಟ್ವೀಟ್'ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ಜಲಶಕ್ತಿ ಅಭಿಯಾನಕ್ಕೆ ಬೆಂಬಲ ನೀಡಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಅಭಿಯನ ಯಶಸ್ವಿಯಾಗಲು ಅಮೀರ್ ಖಾನ್ ಅವರಿಂದ ಸಲಹೆ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಚೆನ್ನೈ ನೀರಿನ ಸಂಕಷ್ಟಕ್ಕೆ ಹಾಲಿವುಡ್ ನಟ ಲಿಯೋನಾರ್ಡೊ ಡಿ ಕ್ಯಾಪ್ರಿಯೋ ಕೂಡ ಆತಂಕ ವ್ಯಕ್ತಪಡಿಸಿದ್ದು, ನೀರಿಲ್ಲದೇ ಸಂಕಷ್ಟ ಎದುರಿಸುತ್ತಿರುವದಕ್ಷಿಣ ಭಾರತದ ಈ ಪ್ರಮುಖ ನಗರವನ್ನು ಮಳೆ ಮಾತ್ರ ರಕ್ಷಿಸಬಲ್ಲದು ಎಂದು ಅಭಿಪ್ರಾಯಪಟ್ಟಿದ್ದಾರೆ.