ಚನ್ನಪಟ್ಟಣದ ಕಡೆ ಹೊರಡುತ್ತಿದ್ದ ಬಿಎಂಟಿಸಿ ಬಸ್​ಕಾಮತ್​ ಹೋಟೆಲ್​ ಬಳಿ ನಿಲ್ಲಿಸಿತ್ತು. ವಿದ್ಯಾರ್ಥಿಗಳೆಲ್ಲ ಊಟಕ್ಕೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ಕಂಡು ಚಾಲಕ ಬಸ್​ನಲ್ಲಿದ್ದ ಇನ್ನು ಕೆಲವು ವಿದ್ಯಾರ್ಥಿಗಳನ್ನು ಇಳಿಸಿದ್ದರಿಂದ ಹೆಚ್ಚಿನ ಪ್ರಾಣಾಪಾಯವಾಗಿಲ್ಲ.

ಬೆಂಗಳೂರು(ಡಿ.03): ಬೆಂಗಳೂರು - ಮೈಸೂರು ರಸ್ತೆಯ ಚನ್ನಪಟ್ಟಣ ಬಳಿ ಬಿಎಂಟಿಸಿ ಬಸ್​ ಹೊತ್ತಿ ಉರಿದಿದೆ. ಶಾಲೆಯೊಂದು ಈ ಬಿಎಂಟಿಸಿ ಬಸ್​ನ್ನು ಬುಕ್​ ಮಾಡಿ ಪ್ರವಾಸಕ್ಕೆ ತೆರಳುತ್ತಿತ್ತು.

ಚನ್ನಪಟ್ಟಣದ ಕಡೆ ಹೊರಡುತ್ತಿದ್ದ ಬಿಎಂಟಿಸಿ ಬಸ್​ಕಾಮತ್​ ಹೋಟೆಲ್​ ಬಳಿ ನಿಲ್ಲಿಸಿತ್ತು. ವಿದ್ಯಾರ್ಥಿಗಳೆಲ್ಲ ಊಟಕ್ಕೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ಕಂಡು ಚಾಲಕ ಬಸ್​ನಲ್ಲಿದ್ದ ಇನ್ನು ಕೆಲವು ವಿದ್ಯಾರ್ಥಿಗಳನ್ನು ಇಳಿಸಿದ್ದರಿಂದ ಹೆಚ್ಚಿನ ಪ್ರಾಣಾಪಾಯವಾಗಿಲ್ಲ.

ಬಸ್​ ನಲ್ಲಿ ಶಾರ್ಟ್​ ಸರ್ಕ್ಯೂಟ್​ನಿಂದಲೇ ಬೆಂಕಿ ಹತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬಸ್​ನಿಂದ ಇಳಿಯುವಾಗ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.