Asianet Suvarna News Asianet Suvarna News

‘ಬಿಜೆಪಿ ಬಳಿ ಇದೆ ವಿಶ್ವಾಸಮತಕ್ಕೆ ಬೇಕಾದ ಅಗತ್ಯ ಸಂಖ್ಯೆ’

ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿದೆ. ಇದೀಗ ವಿಶ್ವಾಸಮತ ಪರೀಕ್ಷೆಯೊಂದು ಬಾಕಿ ಇದ್ದು, ಇದರಲ್ಲಿ ಗೆಲ್ಲುವ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದೆ.

BJP Will in Floor Test Says Madhuswamy
Author
Bengaluru, First Published Jul 27, 2019, 8:33 AM IST

ಬೆಂಗಳೂರು [ಜು.27]: ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಬಹುಮತ ಸಾಬೀತಪಡಿಸಲಿದ್ದಾರೆ. ನಾವು ಬಹುಮತಕ್ಕೆ ಅಗತ್ಯವಾದ ಸಂಖ್ಯೆಯನ್ನು ಹೊಂದಿದ್ದೇವೆ ಎಂದು ಬಿಜೆಪಿಯ ಹಿರಿಯ ಶಾಸಕ ಜೆ.ಸಿ.ಮಾಧುಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಹುಮತ ಸಂಖ್ಯೆ ವಿಚಾರವಾಗಿ ವಿರೋಧ ಪಕ್ಷಗಳು ಗೊಂದಲ ಸೃಷ್ಟಿಸುತ್ತಿವೆ ಎಂದು ಟೀಕಿಸಿದರು. ಸಂವಿಧಾನದ ಪ್ರಕಾರ ವಿಶ್ವಾಸ ಮತಯಾಚನೆ ದಿನ ಸಭೆಯಲ್ಲಿ ಎಷ್ಟು ಸದಸ್ಯರು ಹಾಜರಿರುತ್ತಾರೆಯೋ ಆ ಸಂಖ್ಯೆ ಆಧಾರದ ಮೇರೆಗೆ ಬಹುಮತ ಸಾಬೀತು ನಡೆಯಲಿದೆ.

ಹೀಗಿರುವಾಗ ಅವರು (ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು) ಹೇಳಿದಂತೆ 111 ಸಂಖ್ಯೆ ಬೇಕಾಗಿಲ್ಲ. ಯಡಿಯೂರಪ್ಪನವರು ನೂರಕ್ಕೆ ನೂರರಷ್ಟು ಬಹುಮತ ಪಡೆಯಲಿದ್ದಾರೆ. ಇದಕ್ಕೆ ಅಗತ್ಯವಾದ ಸಂಖ್ಯೆಯನ್ನು ನಾವು ಹೊಂದಿದ್ದೇವೆ ಎಂದು ಸ್ಪಷ್ಟಪಡಿಸಿದರು. 

Follow Us:
Download App:
  • android
  • ios