ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿದೆ. ಇದೀಗ ವಿಶ್ವಾಸಮತ ಪರೀಕ್ಷೆಯೊಂದು ಬಾಕಿ ಇದ್ದು, ಇದರಲ್ಲಿ ಗೆಲ್ಲುವ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದೆ.

ಬೆಂಗಳೂರು [ಜು.27]: ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಬಹುಮತ ಸಾಬೀತಪಡಿಸಲಿದ್ದಾರೆ. ನಾವು ಬಹುಮತಕ್ಕೆ ಅಗತ್ಯವಾದ ಸಂಖ್ಯೆಯನ್ನು ಹೊಂದಿದ್ದೇವೆ ಎಂದು ಬಿಜೆಪಿಯ ಹಿರಿಯ ಶಾಸಕ ಜೆ.ಸಿ.ಮಾಧುಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಬಹುಮತ ಸಂಖ್ಯೆ ವಿಚಾರವಾಗಿ ವಿರೋಧ ಪಕ್ಷಗಳು ಗೊಂದಲ ಸೃಷ್ಟಿಸುತ್ತಿವೆ ಎಂದು ಟೀಕಿಸಿದರು. ಸಂವಿಧಾನದ ಪ್ರಕಾರ ವಿಶ್ವಾಸ ಮತಯಾಚನೆ ದಿನ ಸಭೆಯಲ್ಲಿ ಎಷ್ಟು ಸದಸ್ಯರು ಹಾಜರಿರುತ್ತಾರೆಯೋ ಆ ಸಂಖ್ಯೆ ಆಧಾರದ ಮೇರೆಗೆ ಬಹುಮತ ಸಾಬೀತು ನಡೆಯಲಿದೆ.

ಹೀಗಿರುವಾಗ ಅವರು (ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು) ಹೇಳಿದಂತೆ 111 ಸಂಖ್ಯೆ ಬೇಕಾಗಿಲ್ಲ. ಯಡಿಯೂರಪ್ಪನವರು ನೂರಕ್ಕೆ ನೂರರಷ್ಟು ಬಹುಮತ ಪಡೆಯಲಿದ್ದಾರೆ. ಇದಕ್ಕೆ ಅಗತ್ಯವಾದ ಸಂಖ್ಯೆಯನ್ನು ನಾವು ಹೊಂದಿದ್ದೇವೆ ಎಂದು ಸ್ಪಷ್ಟಪಡಿಸಿದರು.