ಸರ್ಕಾರ ಪತನ: ಮಾಧ್ಯಮಗಳಿಗೆ ಸೆಲ್ಯೂಟ್ ಹೊಡೆದ ಎಸ್.ಎಂ ಕೃಷ್ಣ!
ರಾಜ್ಯ ರಾಜಕಾರಣ ಬದಲಾವಣೆಯ ಹಾದಿಯಲ್ಲಿ ಇರುವಾಗ ಮಾಜಿ ಸಿಎಂ, ಒಂದು ಕಾಲದಲ್ಲಿ ಕಾಂಗ್ರೆಸ್ ಹಿರಿಯ ನಾಯಕರಾಗಿ ಇದೀಗ ಬಿಜೆಪಿಯಲ್ಲಿ ಉನ್ನತ ಸ್ಥಾನ ಪಡೆದುಕೊಂಡಿರುವ ಎಸ್. ಎಂ. ಕೃಷ್ಣ ಅವರ ಹೆಜ್ಜೆ ಸಹ ಅಷ್ಟೆ ಪ್ರಮುಖವಾಗಿದೆ.
ಮೈಸೂರು[ಜು. 25] ಮೈಸೂರಿಗೆ ಆಗಮಿಸಿದ ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕ ಎಸ್.ಎಂ.ಕೃಷ್ಣ ಮಾಧ್ಯಮದವರಿಗೆ ಸೆಲ್ಯೂಟ್ ಹೊಡೆದು ಮುಂದಕ್ಕೆಹೋಗಿದ್ದಾರೆ.
"
ಮೈಸೂರಿನ ವಿಮಾನ ನಿಲ್ದಾಣದಿಂದ ನೇರವಾಗಿ ಬೆಟ್ಟಕ್ಕೆ ಕೃಷ್ಣ ತೆರಳಿದ್ದಾರೆ. ರಾಜ್ಯ ರಾಜಕೀಯದ ಬಗ್ಗೆ ಎಸ್ಎಂಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಾಧ್ಯಮದವರು ಮಾತನಾಡಿಸಲು ಕರೆದರೆ ಸೆಲ್ಯೂಟ್ ಮಾಡಿ ಮಾತನಾಡದೆ ಕೃಷ್ಣ ತೆರಳಿದ್ದಾರೆ.
ಕರ್ನಾಟಕ ರಾಜಕೀಯ ಹೈಡ್ರಾಮಾ: ಆರಂಭದಿಂದ ಅಂತ್ಯದವರೆಗೆ
ರಾಜ್ಯದಲ್ಲಿನ ಕಾಂಗ್ರೆಸ್- ಜೆಡಿಎಸ್ ದೋಸ್ತಿ ಸರ್ಕಾರ ವಿಶ್ವಾಸ ಕಳೆದುಕೊಂಡಿದೆ. ಇದರ ನಡುವೆ ಬಿಜೆಪಿ ನಾಯಕರು ದೆಹಲಿಗೆ ತೆರಳಿದ್ದು ಹೈಕಮಾಂಡ್ ಭೇಟಿಗೆ ಕಾದು ಕುಳಿತಿದ್ದಾರೆ.