Asianet Suvarna News Asianet Suvarna News

ಗೌರಿ ಲಂಕೇಶ್ ಹತ್ಯೆ: ಇತಿಹಾಸಕಾರ ರಾಮಚಂದ್ರ ಗುಹಾಗೆ ಬಿಜೆಪಿ ನೋಟಿಸ್

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಆರ್’ಎಸ್’ಎಸ್ ಹಾಗೂ ಬಿಜೆಪಿಯೇ ಕಾರಣ ಎಂದು ತಳುಕು ಹಾಕಿದ ಖ್ಯಾತ ಇತಿಹಾಸಕಾರ ರಾಮಚಂದ್ರಾ ಗುಹಾರವರಿಗೆ ಬಿಜೆಪಿ ಲೀಗಲ್ ನೋಟಿಸ್ ಕಳುಹಿಸಿದೆ.

BJP Sends Notice to Guha for Linking Gauri Lankeshs Murder With RSS

ನವದೆಹಲಿ (ಸೆ.11): ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಆರ್’ಎಸ್’ಎಸ್ ಹಾಗೂ ಬಿಜೆಪಿಯೇ ಕಾರಣ ಎಂದು ತಳುಕು ಹಾಕಿದ ಖ್ಯಾತ ಇತಿಹಾಸಕಾರ ರಾಮಚಂದ್ರಾ ಗುಹಾರವರಿಗೆ ಬಿಜೆಪಿ ಲೀಗಲ್ ನೋಟಿಸ್ ಕಳುಹಿಸಿದೆ.

ಗೌರಿ ಲಂಕೇಶ್ ಹತ್ಯೆಯಾದಾಗ ರಾಮಚಂದ್ರ ಗುಹಾ  ಹತ್ಯೆಗೆ ಸಂಘ ಪರಿವಾರದವರೇ ಕಾರಣ ಎಂದು ನೇರವಾದ ಆರೋಪ ಹೊರಿಸಿದ್ದರು. ಗೋವಿಂದ ಪನ್ಸಾರೆ, ದಾಬೋಲ್ಕರ್, ಕಲ್ಬುರ್ಗಿಯವರ ಹತ್ಯೆ ಮಾಡಿದಂತೆ ಗೌರಿ ಲಂಕೇಶ್’ರವರನ್ನು ಸಂಘ ಪರಿವಾರದವರೇ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಕೇಂದ್ರ ಸರ್ಕಾರದ ಆಡಳಿತ ಜನರಲ್ಲಿ ದ್ವೇಷ, ಅಸಹಿಷ್ಣುತೆ ಭಾವನೆಯನ್ನು ಬಿತ್ತುತ್ತಿದೆ ಎಂದಿದ್ದರು. ಗುಹಾರವರ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ಯುವ ಮೋರ್ಚಾ ಲೀಗಲ್ ನೋಟಿಸ್ ಕಳುಹಿಸಿದೆ.

ಗುಹಾರವರು ಬಿಜೆಪಿ ಹಾಗೂ ಮೋದಿ ಸರ್ಕಾರವನ್ನು ಸದಾ ಟೀಕಿಸುತ್ತಿದ್ದರು. ಹಾಗಾಗಿ ಇವರಿಗೆ ಬೆದರಿಕಾ ಈ ಮೇಲ್’ಗಳನ್ನು ಕಳುಹಿಸಲಾಗಿತ್ತು ಎಂದು ರಾಮಚಂದ್ರ ಗುಹಾ ಹೇಳಿದ್ದಾರೆ.   

Latest Videos
Follow Us:
Download App:
  • android
  • ios