Asianet Suvarna News Asianet Suvarna News

ನಾನು ಹೊನ್ನಾಳಿ ಹುಲಿ, ಯಾವುದಕ್ಕೂ ಜಗ್ಗೋದಿಲ್ಲ: ಯಾರಿಗೆ ಅವಾಜ್ ?

ಮೊದಲೇ ಸಚಿವ ಸ್ಥಾನ ಸಿಕ್ಕಿಲ್ಲವೆಂದು ಹತಾಶೆಯಲ್ಲಿರುವ ರೇಣುಕಾಚಾರ್ಯ ನಾನು ಹೊನ್ನಾಳಿ ಹುಲಿ ಯಾವುದಕ್ಕೂ ಜಗ್ಗೋದಿಲ್ಲ ಎಂದು ಗುಡುಗಿದ್ದಾರೆ? ಅಷ್ಟಕ್ಕೂ ರೇಣುಕಾಚಾರ್ಯ  ಅವಾಜ್ ಹಾಕಿದ್ದು ಯಾರಿಗೆ? 

BJP MLA MP renukacharya Hits out at Minister lakshman savadi
Author
Bengaluru, First Published Aug 24, 2019, 4:23 PM IST

ಚಿತ್ರದುರ್ಗ, (ಆ.24): ಹೊನ್ನಾಳಿ ಹುಲಿ ನಾನು, ಯಾವುದಕ್ಕೂ ಜಗ್ಗೋದಿಲ್ಲ.  ಸಚಿವ ಸ್ಥಾನಕ್ಕಾಗಿ ಭಿಕ್ಷೆ ಬೇಡುವುದಿಲ್ಲ. ಸಚಿವ ಸ್ಥಾನ ಬೇಕಂದ್ರೆ ಬಿಎಸ್ ವೈ ಬಳಿ ಪಟ್ಟು ಹಿಡಿದು ಕೂಡುತ್ತೇನೆ ಎಂದು ಆಕ್ರೋಶ ಭರಿತರಾಗಿ ಹೇಳಿದರು.

ಇಂದು (ಶನಿವಾರ) ಚಿತ್ರದುರ್ಗದ ಸಿರಿಗೆರೆ ಗ್ರಾಮದಲ್ಲಿ ಮಾತನಾಡಿದ ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ, ನಮಗೆ ಸದ್ಯ ಮಂತ್ರಿ ಸ್ಥಾನದ ಅಗತ್ಯವಿಲ್ಲ. ಯಡಿಯೂರಪ್ಪ ಸಂಕಷ್ಟದಲ್ಲಿದ್ದಾಗ ಸೋತವರು ಸಾಥ್ ನೀಡಲಿಲ್ಲ. ಈಗ ಕೆಲವರು ಸಚಿವರಾಗಿ ನಮಗೆ ನೀತಿ ಪಾಠ ಹೇಳುತ್ತಿದ್ದಾರೆ, ಅದರ ಅಗತ್ಯವಿಲ್ಲ ಎಂದು ಹೆಸರು ಹೇಳಿದೆ ಪರೋಕ್ಷವಾಗಿ ಲಕ್ಷ್ಮಣ ಸವದಿ ವಿರುದ್ಧ ಗುಡುಗಿದರು.

ಕತ್ತಿ ಪರ ರೇಣುಕಾ ಬ್ಯಾಟಿಂಗ್: ಸವದಿ ಒಬ್ರೆ ಸೋತಿದ್ದಾರಾ?

ಎಲ್ಲರೂ ತಿರಸ್ಕರಿಸಿದ ಅಬಕಾರಿ ಖಾತೆ ಪಡೆದು ರಾಜ್ಯ ಸುತ್ತಿ ಇಲಾಖೆಗೆ ಹೆಚ್ಚಿನ ಆದಾಯ ತಂದುಕೊಟ್ಟವನು ನಾನು ಎಂದು ಹೇಳಿದರು.

ಹೈಕಮಾಂಡ್ ಬಳಿ ಯಡಿಯೂರಪ್ಪ ಅಸಾಹಯಕರಾಗಿದ್ದಾರೆಂಬ ಕಾಂಗ್ರೆಸ್ ನಾಯಕ ಆಂಜನೇಯ ಹೇಳಿಕೆಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಮಾಜಿ ಸಚಿವ ಆಂಜನೇಯ, ಸಿದ್ಧರಾಮಯ್ಯ ಬಾಲವಾಗಿದ್ದವರು ಎಂದು ವ್ಯಂಗ್ಯವಾಡಿದರು.

ಈ ರಾಜ್ಯದಲ್ಲಿ ಮತ್ತೋರ್ವ ಯಡಿಯೂರಪ್ಪ ಹುಟ್ಟಲ್ಲ. ಭ್ರಷ್ಟಾಚಾರಿ ಆಂಜನೇಯಗೆ ಬಿಎಸ್ ವೈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು  ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

Follow Us:
Download App:
  • android
  • ios