ಕಾಂಗ್ರೆಸ್ ಕಾರ್ಯಕರ್ತ ಮೇಲೆ ಹಲ್ಲೆ ಪ್ರಕರಣ: ಬಿಜೆಪಿ ಶಾಸಕ ಕಾಗೆ ಜಾಮೀನು
ಶಾಸಕ ರಾಜು ಕಾಗೆ ಸೇರಿ 8 ಆರೋಪಿಗಳಿಗೆ ಬೆಳಗಾವಿ ಪ್ರಧಾನ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಬೆಳಗಾವಿ (ಜ.25): ಕಾಂಗ್ರೆಸ್ ಕಾರ್ಯಕರ್ತ ವಿವೇಕ್ ಶೆಟ್ಟಿ ಮೇಲೆ ಹಲ್ಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಕಾಗೆವಾಡ ಶಾಸಕ ರಾಜ ಕಾಗೆ ಪಟಾಲಂಗೆ ಜಾಮೀನು ಸಿಕ್ಕಿದೆ.
ಶಾಸಕ ರಾಜು ಕಾಗೆ ಸೇರಿ 8 ಆರೋಪಿಗಳಿಗೆ ಬೆಳಗಾವಿ ಪ್ರಧಾನ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ, ರಾಜು ಕಾಗೆ ಸಹೋದರ, ಪತ್ನಿ ಶೋಭಾ ಕಾಗೆ, ರಾಜು ಕಾಗೆ ಪುತ್ರಿ ತೃಪ್ತಿ ಕಾಗೆ, ಸಂಬಂಧಿಕ ಪ್ರಸಾದ್ ಸೇರಿದಂತೆ 8 ಮಂದಿಗಳಿಗೆ ಜಾಮೀನು ನೀಡಿತ್ತು.
ಜನವರಿ 1 ರಂದು ಶಾಸಕ ರಾಜುಕಾಗೆ ಪಟಾಲಂ, ಕಾಂಗ್ರೆಸ್ ಕಾರ್ಯಕರ್ತ ವಿವೇಕ್ ಶೆಟ್ಟಿ ಮನೆಗೆ ನುಗ್ಗಿ ಆತನಿಗೆ ಮನಬಂದಂತೆ ಹಲ್ಲೆ ನಡೆಸಿತ್ತು.
ಪ್ರಕರಣ ಸಂಬಂಧ ದೂರು ದಾಖಲಸಿಕೊಂಡ ಪೊಲೀಸರು, ಇತ್ತೀಚೆಗಷ್ಟೆ ಆರೋಪಿಗಳನ್ನು ಬಂಧಿಸಿ, ಹಿಂಡಲಗಾ ಜೈಲಿಗಟ್ಟಿದ್ದರು.