ಧೂಳೆಬ್ಬಿಸಿದ ಬಿಜೆಪಿ: 3+2=5 ಮತ್ತೆ ಕಮಲ ತೆಕ್ಕೆಗೆ?
ಮತ್ತೆ ಅಧಿಕಾದ ಸವಿ ಉಣ್ಣಲಿರುವ ಬಿಜೆಪಿ| ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಕಹಿ| ಹರಿಯಾಣದಿಂದ ಬರಲಿದೆಯಾ ಬಿಜೆಪಿಗೆ ಸಿಹಿ ಸುದ್ದಿ?| ರಾಜ್ಯದ 5 ಮಹಾನಗರ ಪಾಲಿಕೆ ಚುನಾವಣೆಲ್ಲಿ ಬಿಜೆಪಿ ಜಯದತ್ತ
ಚಂಢಿಗಡ್(ಡಿ.19): ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡು ಹತಾಶರಾಗಿರುವ ಬಿಜೆಪಿಗೆ, ಹರಿಯಾಣದಿಂದ ಸಿಹಿ ಸುದ್ದಿಯೊಂದು ಬಂದಿದೆ.
ರಾಜ್ಯದ 5 ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರೆದಿದ್ದು, ಐದೂ ಪಾಲಿಕೆಯಲ್ಲಿ ಆಡಳಿತಾರೂಢ ಬಿಜೆಪಿ ಭರ್ಜರಿ ಗೆಲುವಿನತ್ತ ದಾಪುಗಾಲು ಹಾಕುತ್ತಿದೆ.
ರಾಜ್ಯದ ಹಿಸ್ಸಾರ್, ರೋಹ್ಟಕ್, ಯಮುನಾನಗರ, ಪಾನಿಪತ್ ಮತ್ತು ಕರ್ನಾಲ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯದ್ದೇ ದರ್ಬಾರು ನಡೆಯುವುದು ಬಹುತೇಕ ನಿಶ್ಚಿತ.
ಈ ಬಾರಿ ಖುದ್ದು ಸಿಎಂ ಮನೋಹರ್ ಲಾಲ್ ಖಟ್ಟರ್ ಅವರೇ ಚುನಾವಣಾ ಪ್ರಚಾರದ ನೇತೃತ್ವದ ವಹಿಸಿದ್ದರ ಪರಿಣಾಮ, ಐದೂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಗೆಲುವು ಶತಸಿದ್ಧ ಎನ್ನಲಾಗಿದೆ.