Asianet Suvarna News Asianet Suvarna News

ದಿಲ್ಲಿಗೆ ತೆರಳಿದ್ದ ಇಬ್ಬರು ನಾಯಕರು ವಾಪಸ್

ರಾಜ್ಯ ರಾಜಕೀಯ ಪ್ರಹಸನ ಮುಂದುವರಿದಿದೆ. ಇದೇ ವೇಳೆ ದಿಲ್ಲಿಗೆ ತೆರಳಿದ್ದ ಇಬ್ಬರು ನಾಯಕರು ರಾಜ್ಯಕ್ಕೆ ಮರಳಿದ್ದಾರೆ. 

BJP Leaders Basavaraj Bommai Murugesh Nirani Back from Delhi
Author
Bengaluru, First Published Jul 14, 2019, 4:15 PM IST

ಬೆಂಗಳೂರು [ಜು.14] : ರಾಜ್ಯ ರಾಜಕೀಯ ಪ್ರಹಸನ ನಡೆಯುತ್ತಿರುವ ಈ ಸಂದರ್ಭದಲ್ಲಿಯೇ ದೆಹಲಿಗೆ ತೆರಳಿದ್ದ ಬಿಜೆಪಿ ನಾಯಕರಿಬ್ಬರು ವಾಪಸಾಗಿದ್ದಾರೆ. ಶಾಸಕ ಬಸವರಾಜ ಬೊಮ್ಮಾಯಿ ಹಾಗೀ ಮುರುಗೇಶ್ ನಿರಾಣಿ ಬೆಂಗಳೂರಿಗೆ ಮರಳಿದ್ದಾರೆ.

ರಾಜ್ಯ ಮರಳಿದ ಬೊಮ್ಮಾಯಿ ಇಲ್ಲಿ ರಾಜಕಾರಣದ ಬಗ್ಗೆ ಪ್ರತಿಕ್ರಿಯಿಸುತ್ತಾ, ಇಲ್ಲಿ ಅಸ್ತಿತ್ವದಲ್ಲಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ  ಬಹುಮತ ಕಳೆದುಕೊಂಡಿದೆ. ಮಿತ್ರ ಪಕ್ಷದಲ್ಲಿ ಭಿನ್ನಾಭಿಪ್ರಾಯ ವಿಶ್ವಾಸದ ಕೊರತೆ ಬಹಿರಂಗಗೊಂಡಿದೆ. ಇದರಿಂದ ಈ ಸರ್ಕಾರಕ್ಕೆ ಮುಂದುವರಿಯುವ ಯಾವುದೇ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಜ್ಯ ಮೈತ್ರಿ ಪಕ್ಷದ ಹಲವು ಶಾಸಕರು ರಾಜೀನಾಮೆ ನೀಡಿದ್ದು, ಸಂಖ್ಯಾಬಲವೂ ಕೂಡ ಇಲ್ಲ. ಹೀಗಾಗಿ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಗೌರವಯುತ ಕೆಲಸ ಎಂದರು.

Follow Us:
Download App:
  • android
  • ios