ಬಿಜೆಪಿ ತೊರೆದಿದ್ದ ನಾಯಕ ಜೆಡಿಎಸ್ ಸೇರ್ಪಡೆ..?
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಹುನಗುಂದ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಉದ್ಯಮಿ ಎಸ್.ಆರ್.ನವಲಿಹಿರೇಮಠ ಇದೀಗ ಜೆಡಿಎಸ್ ಸೇರುವ ಸಾಧ್ಯತೆ ಇದೆ.
ಹುನಗುಂದ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಹುನಗುಂದ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಉದ್ಯಮಿ ಎಸ್.ಆರ್.ನವಲಿಹಿರೇಮಠ ಇದೀಗ ಜೆಡಿಎಸ್ ಸೇರುವ ಸಾಧ್ಯತೆ ಇದೆ.
ಮೊದಲು ಬಿಜೆಪಿ ಸೇರಿದ್ದ ಎಸ್. ಆರ್.ನವಲಿಹಿರೇಮಠ ಅವರು ಟಿಕೆಟ್ ತಪ್ಪಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಪಕ್ಷ ಸೇರ್ಪಡೆ ಬಗ್ಗೆ ಎಚ್ಡಿಕೆ ಜತೆ ಮಾತುಕತೆ ನಡೆಸಿದ್ದಾರೆ.
ಆದರೆ ಬಾಗಲಕೋಟೆಯ ಹುನುಗುಂದದಲ್ಲಿ ದೊಡ್ಡನಗೌಡ ಪಾಟೀಲ್ ಅವರು ಅತ್ಯಧಿಕ ಪ್ರಮಾಣದಲ್ಲಿ ಬಹುಮತವನ್ನು ಪಡೆದು ವಿಜಯಿಯಾದರು.