ಚಿಕಿತ್ಸೆಗೆ ಜೇಟ್ಲಿ ಸ್ಪಂದನೆ: ಏಮ್ಸ್ ವೈದ್ಯರಿಂದ ಮಾಹಿತಿ
ಚಿಕಿತ್ಸೆಗೆ ಜೇಟ್ಲಿ ಸ್ಪಂದನೆ| ಆರೋಗ್ಯ ಸ್ಥಿರ| ಏಮ್ಸ್ ವೈದ್ಯರಿಂದ ಮಾಹಿತಿ|
ನವದೆಹಲಿ[ಆ.12]: ಉಸಿರಾಟದ ತೊಂದರೆಯಿಂದಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಆರೋಗ್ಯ ಸ್ಥಿರವಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಅನಾರೋಗ್ಯದಿಂದಾಗಿ ಜೇಟ್ಲಿಯವರನ್ನು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಏಮ್ಸ್ಗೆ ದಾಖಲು ಮಾಡಲಾಗಿತ್ತು. ಜೇಟ್ಲಿ ಐಸಿಯುನಲ್ಲಿ ಜೇಟ್ಲಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಹೃದಯ ಬಡಿತ ಹಾಗೂ ರಕ್ತ ಸಂಚಾರ ಸ್ಥಿರವಾಗಿದೆ.
ಬಹು ವೈದ್ಯರ ತಂಡ ಜೇಟ್ಲಿ ಆರೋಗ್ಯದ ಮೇಲೆ ನಿಗಾ ವಹಿಸಿದೆ ಎಂದು ಏಮ್ಸ್ ಮೂಲಗಳು ತಿಳಿಸಿವೆ.