‘‘ಸಂಸತ್ತಿನ ಕಲಾಪಗಳು ವ್ಯರ್ಥವಾಗುತ್ತಿರುವುದರಿಂದ ದೇಶಕ್ಕೆ ಕೋಟ್ಯಂತರ ರುಪಾಯಿ ನಷ್ಟವಾಗುತ್ತಿದೆ. ಎಲ್ಲ ಸವಾಲತ್ತುಗಳನ್ನು ಪಡೆಯುತ್ತಿರುವ ಹೊರತಾಗಿಯೂ ನಾವು ನಮ್ಮ ಕಾರ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ"- ಜಯಂತ್ ಜಯ್ ಪಾಂಡಾ, ಬಿಜೆಡಿ ಸಂಸದ

ನವದೆಹಲಿ(ಡಿ.18): ಚಳಿಗಾಲದ ಸಂಸತ್ ಕಲಾಪದ ಸಮಯ ವ್ಯರ್ಥವಾದ ಪ್ರಮಾಣದಷ್ಟು ವೇತನ ಹಿಂದಿರುಗಿಸುವುದಾಗಿ ಬಿಜು ಜನತಾದಳ(ಬಿಜೆಡಿ) ಪಕ್ಷದ ಸಂಸದ ಜಯಂತ್ ಜಯ್ ಪಾಂಡಾ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನೋಟು ಅಮಾನ್ಯದ ಕ್ರಮದಿಂದ ಚಳಿಗಾಲದ ಅವೇಶನವೂ ಯಾವುದೇ ಚರ್ಚೆಯಿಲ್ಲದೆ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ವೇತನ ಹಿಂದಿರುಗಿಸುವುದಾಗಿ ಸಂಸದ ಜಯಂತ್ ಜಯ್ ಪಾಂಡಾ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಒಡಿಶಾ ಮೂಲದ ಸಂಸದ ಪಾಂಡಾ, ‘‘ಸಂಸತ್ತಿನ ಕಲಾಪಗಳು ವ್ಯರ್ಥವಾಗುತ್ತಿರುವುದರಿಂದ ದೇಶಕ್ಕೆ ಕೋಟ್ಯಂತರ ರುಪಾಯಿ ನಷ್ಟವಾಗುತ್ತಿದೆ. ಎಲ್ಲ ಸವಾಲತ್ತುಗಳನ್ನು ಪಡೆಯುತ್ತಿರುವ ಹೊರತಾಗಿಯೂ ನಾವು ನಮ್ಮ ಕಾರ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ,’’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ 5-6 ವರ್ಷಗಳಿಂದ ಕಲಾಪ ವ್ಯರ್ಥವಾದ ಭಾಗದಷ್ಟು ವೇತನ ಮತ್ತು ಭತ್ಯೆಯನ್ನು ವಾಪಸ್ ನೀಡುತ್ತಿದ್ದೆ. ಈಗಲೂ ಅದನ್ನೇ ಅನುಸರಿಸುತ್ತೇನೆ. ಅವೇಶನಕ್ಕೆ ಅಡ್ಡಿಯಾಗಿದ್ದರಿಂದ ಅತಿಹೆಚ್ಚು ಹಣ ಪೋಲಾಗಿದ್ದು, ನನ್ನದು ಏನೇನು ಅಲ್ಲ,’’ ಎಂದಿದ್ದಾರೆ.