ಭೂಸೇನೆಯ ನೂತನ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಲೆ| ಜ| ಬಿಪಿನ್ ರಾವತ್
ಅಧಿಕಾರ ಹಸ್ತಾಂತರಿಸುವ ಮೊದಲು ನಿವೃತ್ತಿ ಹೊಂದಲಿರುವ ಲೆ| ಜ| ದಲ್ಬೀರ್ ಸಿಂಗ್ ಹಾಗೂ ವಾಯುಪಡೆ ಮುಖ್ಯಸ್ಥ ಅನುಪ್ ರಾಹಾ ಇಂಡಿಯಾ ಗೇಟ್’ನಲ್ಲಿರುವ ಅಮರ್ ಜವಾನ್ ಜ್ಯೋತಿಗೆ ಭೇಟಿ ನೀಡಿ ಗೌರವ ಸಲ್ಲಿಸಿದರು.
ನವದೆಹಲಿ (ಡಿ.31): ಭೂಸೇನೆಯ ನೂತನ ಮುಖ್ಯಸ್ಥರಾಗಿ ಲೆ| ಜ| ಬಿಪಿನ್ ರಾವತ್ ಇಂದು ಲೆ| ಜ| ದಲ್ಬೀರ್ ಸಿಂಗ್ ಅವರಿಂದ ಅಧಿಕಾರ ಸ್ವೀಕರಿಸಿದ್ದಾರೆ.
ಅಧಿಕಾರ ಹಸ್ತಾಂತರಿಸುವ ಮೊದಲು ನಿವೃತ್ತಿ ಹೊಂದಲಿರುವ ಲೆ| ಜ| ದಲ್ಬೀರ್ ಸಿಂಗ್ ಹಾಗೂ ವಾಯುಪಡೆ ಮುಖ್ಯಸ್ಥ ಅನುಪ್ ರಾಹಾ ಇಂಡಿಯಾ ಗೇಟ್’ನಲ್ಲಿರುವ ಅಮರ್ ಜವಾನ್ ಜ್ಯೋತಿಗೆ ಭೇಟಿ ನೀಡಿ ಗೌರವ ಸಲ್ಲಿಸಿದರು.
ದೇಶದ ಗೌರವವನ್ನು ಕಾಪಾಡಲು ತ್ಯಾಗ-ಬಲಿದಾನಗಳನ್ನು ನೀಡಿದ ಯೋಧರಿಗೆ ನನ್ನ ನಮನಗಳು, ಎಂದು ಲೆ| ಜ| ದಲ್ಬೀರ್ ಸಿಂಗ್ ಹೇಳಿದರು.
ಏಕ ಶ್ರೇಣಿ ಏಕ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತಂದಿರುವುದಕ್ಕೆ ಪ್ರಧಾನಿ ಮೋದಿ ಹಾಗೂ ಸರ್ಕಾರಕ್ಕೆ ಲೆ| ಜ| ದಲ್ಬೀರ್ ಸಿಂಗ್ ಧನ್ಯವಾದ ಸಲ್ಲಿಸಿದ್ದಾರೆ.
ಭಾರತೀಯ ಸೇನೆಯು ಆಂತರೀಕ ಹಾಗೂ ಬಾಹ್ಯ ಸವಾಲಗಳೆನ್ನದುರಿಸಲು ಸಮರ್ಥವಾಗಿದೆ ಎಂದಿರುವ ಅವರು ಮಾತುಗಳಿಗಿಂತ ಕೃತಿಯೇ ಮುಖ್ಯವಾಗಿರಬೇಕೆಂದು ನಂಬಿದವನು ನಾನು, ಎಂದು ಹೇಳಿದ್ದಾರೆ