Asianet Suvarna News Asianet Suvarna News

ಬಿಗ್ 3: ಸೊಳ್ಳೆಗಳ ಕಾಟಕ್ಕೆ ಮುಕ್ತಿ ನೀಡಿದ ವರದಿ!

ಇದು ಬಿಗ್ 3 ವರದಿ ಪ್ರಸಾರದ ಇಂಪ್ಯಾಕ್ಟ್

ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆದ ಬೀದರ್ ಜನತೆ

ಗುಂಡಿ ಮುಚ್ಚಲು ಕ್ರಮ ಕೈಗೊಂಡ ನಗರಾಡಳಿತ

ಒಂದೂವರೆ ವರ್ಷದ ಸಮಸ್ಯೆಗೆ ತಕ್ಷಣ ಪರಿಹಾರ

ಬೀದರ್(ಜು.14): ಇಲ್ಲಿನ ಬ್ಯಾಂಕ್ ಕಾಲೋನಿಯಲ್ಲಿ ಸೊಳ್ಳೆಗಳ ಕಾಟಕ್ಕೆ ಜನ ಬೇಸತ್ತು ಹೋಗಿದ್ದಾರೆ. ಕಾಮಗಾರಿಗೆಂದು ಗುಂಡಿ ಅಗೆದು ಅರ್ಧಕ್ಕೆ ಬಿಟ್ಟಿರುವುದೇ ಇದಕ್ಕೆ ಕಾರಣ. ಆದರೆ ಈ ಕುರಿತು ನಗರಾಡಳಿತ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ.

ಆದರೆ ಈ ವಿಷಯವನ್ನು ನಗರಾಡಳಿತದ ಗಮನಕ್ಕೆ ತರಲು ಸುದ್ದಿ ಪ್ರಸಾರ ಮಾಡಿದ ಸುವರ್ಣನ್ಯೂಸ್ ಬಿಗ್ 3, ಸೊಳ್ಳೆಗಳ ಕಾಟದಿಂದ ಜನರಿಗಾಗುತ್ತಿರುವ ತೊಂದರೆಯನ್ನು ತೋರಿಸಿತ್ತು. ತಕ್ಷಣ ಎಚ್ಚೆತ್ತ ಬೀದರ್ ನಗರಾಡಳಿತ, ಕೂಡಲೇ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿದೆ.

ಕಳೆದ ಒಂದುವರೆ ವರ್ಷದಿಂದ ಸೊಳ್ಳೆಗಳ ಕಾಟಕ್ಕೆ ಬೇಸತ್ತಿದ್ದ ಸಾರ್ವಜನಿಕರಿಗೆ ಬಿಗ್ 3 ವರದಿ ಪ್ರಸಾರದಿಂದ ನೆಮ್ಮದಿ ಸಿಕ್ಕಿದ್ದು, ಮನಸ್ಸಿದ್ದರೆ ಮಾರ್ಗ ಎಂಬುದನ್ನು ಬಿಗ್ 3 ಸಾಬೀತು ಮಾಡಿದೆ.