ಮೈಸೂರು(ಸೆ.18): ಸಿಎಂ ತವರಲ್ಲಿ ಮರ್ಯಾದ ಹತ್ಯೆ ಬೆನ್ನತ್ತಿದ ತನಿಖಾ ವರದಿಗೆ ಉತ್ತಮ ವರದಿಗಾರ ಪ್ರಶಸ್ತಿ ಲಭಿಸಿದೆ. ಮೈಸೂರು ವರದಿಗಾರ ರವಿಪಾಂಡವಪುರ ಅವರಿಗೆ ಉತ್ತಮ ವರದಿಗಾರ ಹಾಗೂ ಕ್ಯಾಮೆರಾಮೆನ್​ ಪ್ರಮೋದ್​ ಪ್ರಭು ಅವರಿಗೆ ಉತ್ತಮ ಕ್ಯಾಮೆರಾಮೆನ್​ ಪ್ರಶಸ್ತಿ ನೀಡಲಾಗಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕು ನಾಗಾಪುರ ಹಾಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಟಿ ಭಾವನ, ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ಬೆಜ್​ವಾಡ ವಿಲ್ಸನ್, ಪರಿಸರ ಪತ್ರಕರ್ತ ನಾಗೇಶ್​ ಹೆಗ್ಡೆ ಪ್ರಶಸ್ತಿ ವಿತರಿಸಿದರು. 2013-14 ನೇ ಸಾಲಿನಲ್ಲಿಯೂ ಅಮ್ಮಂದಿರ ದಿನದ ವಿಶೇಷ ವರದಿಗೆ ಉತ್ತಮ ವರದಿಗಾರ ಪ್ರಶಸ್ತಿ ಲಭಿಸಿತ್ತು. ರವಿಪಾಂಡವಪುರ ಎರಡನೇ ಬಾರಿಗೆ ಉತ್ತಮ ವರದಿಗಾರ ಪ್ರಶಸ್ತಿ ಪಡೆದಿದ್ದಾರೆ.