ಮಳೆಗೆ ವಾಲಿದ ಖಾಸಗಿ ಕಟ್ಟಡ; ಸ್ಥಳೀಯರಲ್ಲಿ ಆತಂಕ
ಕಟ್ಟಡ ವಾಲಿರುವುದರಿಂದ ಯಾವುದೇ ಸಮಸ್ಯೆಯಿಲ್ಲ. ಈಗಾಗಲೇ ಕಟ್ಟಡ ದ್ವಂಸ ಮಾಡಲು ಸಿದ್ದತೆ ಮಾಡಲಾಗಿದೆ. ಕಟ್ಟಡವನ್ನು ಮೇಲಿನಿಂದ ಹಂತಹಂತವಾಗಿ ದ್ವಂಸ ಮಾಡಲಾಗುತ್ತದೆ. ನಾಳೆಯೂ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಕಟ್ಟಡ ದ್ವಂಸ ತಜ್ಞ ಶ್ರೀನಿವಾಸ್ ತಿಳಿಸಿದ್ದಾರೆ.
ಬೆಂಗಳೂರು(ಆ.16): ಸೋಮವಾರರಿಂದ ಎಡಬಿಡದೇ ಬೆಂಗಳೂರಿನಲ್ಲಿ ಸುರಿದಿರುವ ಮಳೆಯು ಭಾರೀ ಅವಾಂತರವನ್ನೇ ಸೃಷ್ಟಿಸಿದ್ದು, ಈಜಿಪುರದಲ್ಲಿ ನಿರ್ಮಾಣ ಹಂತದಲ್ಲಿದ್ದ ಐದಂತಸ್ತಿನ ಕಟ್ಟಡವೊಂದು ಉರುಳುವ ಭೀತಿ ಎದುರಿಸುತ್ತಿದೆ.
ಇಂದು ಮುಂಜಾನೆ ಮೂರು ಗಂಟೆಗೆ ಕಟ್ಟಡ ವಾಲಿರುವ ಸದ್ದು ಕೇಳಿಬಂದ ಹಿನ್ನಲೆಯಲ್ಲಿ ಅಕ್ಕಪಕ್ಕದ ನಿವಾಸಿಗಳು ಬೀದಿಯಲ್ಲಿ ಬಂದು ಕುಳಿತ್ತಿದ್ದರು. ಮೊಹಮ್ಮದ್ ಸಾಧೀರ್ ಎಂಬುವವರಿಗೆ ಸೇರಿದ ಮನೆಯು ನಿರಂತರ ಮಳೆಯಿಂದಾಗಿ ಒಂದು ಕಡೆ ವಾಲಿದೆ. ಈಜಿಪುರದ 14ನೇ ಕ್ರಾಸ್'ನಲ್ಲಿನ ಮನೆಗೆ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ದೌಡಾಯಿಸಿದ್ದು, ಅಕ್ಕಪಕ್ಕದ ನಿವಾಸಿಗಳನ್ನು ತೆರವುಗೊಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಎಕ್ಸಿಕ್ಯೂಟಿವ್ ಇಂಜಿನಿಯರ್ ಇಂಜಿನಿಯರ್ ಶ್ರೀನಿವಾಸ್ ಪರೀಶೀಲನೆ ನಡೆಸಿದ್ದಾರೆ. ಕಟ್ಟಡದ ಪಿಲ್ಲರ್'ನಲ್ಲಿ ಬಿರುಕು ಕಾಣಿಸಿಕೊಂಡಿದ್ದೇ ಕಟ್ಟಡ ವಾಲಲು ಕಾರಣ ಎನ್ನಲಾಗುತ್ತಿದ್ದು, ಕಟ್ಟಡ ಕುಸಿಯುವ ಮುನ್ನ, ಕಟ್ಟಡ ದ್ವಂಸಗೊಳಿಸಲು ಬಿಬಿಎಂಪಿ ತೀರ್ಮಾನಿಸಿದೆ. ಅಲ್ಲದೇ ಅನುಮತಿಗೂ ಮೀರಿ ಕಟ್ಟಡ ನಿರ್ಮಿಸಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಕಟ್ಟಡ ವಾಲಿರುವುದರಿಂದ ಯಾವುದೇ ಸಮಸ್ಯೆಯಿಲ್ಲ. ಈಗಾಗಲೇ ಕಟ್ಟಡ ದ್ವಂಸ ಮಾಡಲು ಸಿದ್ದತೆ ಮಾಡಲಾಗಿದೆ. ಕಟ್ಟಡವನ್ನು ಮೇಲಿನಿಂದ ಹಂತಹಂತವಾಗಿ ದ್ವಂಸ ಮಾಡಲಾಗುತ್ತದೆ. ನಾಳೆಯೂ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಕಟ್ಟಡ ದ್ವಂಸ ತಜ್ಞ ಶ್ರೀನಿವಾಸ್ ತಿಳಿಸಿದ್ದಾರೆ.