ದೇಶದಲ್ಲಿ ಅಂಗಾಂಗ ಮರುಜೋಡಣೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು, ಗ್ರೀನ್ ಕಾರಿಡರ್ ನಿರ್ವಹಣೆಗಾಗಿ ವಿಶೇಷ  ಅಧಿಕಾರಿಯನ್ನು ನೇಮಿಸಿದ್ದಾರೆ.

ಬೆಂಗಳೂರು (ನ.29): ದೇಶದಲ್ಲಿ ಅಂಗಾಂಗ ಮರುಜೋಡಣೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು, ಗ್ರೀನ್ ಕಾರಿಡರ್ ನಿರ್ವಹಣೆಗಾಗಿ ವಿಶೇಷ ಅಧಿಕಾರಿಯನ್ನು ನೇಮಿಸಿದ್ದಾರೆ.

ಅಂಗಾಂಗ ಮರುಜೋಡಣೆಗೆ ಬೆಂಗಳೂರು ಪ್ರಮುಖ ನಗರವಾಗಿದೆ. ಸಾಗಣೆಗೆ ಪ್ರತಿ 15 ದಿನದಲ್ಲೊಂದು ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಅನುಕೂಲ ಆಗುವ ದೃಷ್ಟಿಯಿಂದ ಪೋಲಿಸರು ಈ ಯೋಜನೆಗೆ ಮುಂದಾಗಿದ್ದಾರೆ.

ಇದರ ಮೇಲುಸ್ತುವಾರಿಯನ್ನು ಎಸಿಪಿ ವಹಿಸಿಕೊಳ್ಳಲಿದ್ದಾರೆ.