ಸೆಕ್ಸ್ಗೆ ಸಹಕರಿಸಲಿಲ್ಲವೆಂದು ಮಂಗಳಮುಖಿ ಕೊಂದವನಿಗೆ ಶಿಕ್ಷೆ ಏನು ಗೊತ್ತಾ?
ಸೆಕ್ಸ್ಗೆ ಸಹಕರಿಸಲಿಲ್ಲವೆಂದು ಮಂಗಳಮುಖಿ ಕೊಂದವನಿಗೆ ಶಿಕ್ಷೆ ಆಗಿದ್ದೇನು ಏನು ಗೊತ್ತಾ? ಇಲ್ಲಿದೆ ನೋಡಿ.
ಬೆಂಗಳೂರು, [ಅ.30]: ಮಂಗಳಮುಖಿಯನ್ನ ಕೊಲೆ ಮಾಡಿದ್ದ ಆರೋಪಿಗೆ ಸಿಟಿಸಿವಿಲ್ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.
ಸಿಟಿಸಿವಿಲ್ ನ್ಯಾಯಧೀಶ.ಶಿವಶಂಕರ್ ಬಿ ಅಮರಣ್ಣನವರ್ ಅವರು ಇಂದು [ಮಂಗಳವಾರ] ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದರು.ಅಬ್ದುಲ್ ಫರೀದ್ ಜೀವಾವಧಿ ಶಿಕ್ಷೆಗೆ ಒಳಗಾದ ಆರೋಪಿ.
28/10/2011ರಲ್ಲಿ ಬೆಂಗಳೂರಿನ ಮೈಸೂರು ರಸ್ತೆಯ ಶ್ಯಾಮಣ್ಣ ಗಾರ್ಡನ್ ನಲ್ಲಿ ಮಂಗಳಮುಖಿ ಕೊಲೆಯಗಿತ್ತು. ಲೈಂಗಿಕ ಕ್ರಿಯೆಗೆ ಸಹಕರಿಸಲಿಲ್ಲ ಎಂದು ಮಂಗಳಮುಖಿ ನವೀನಾ ಅವರನ್ನ ಅಬ್ದುಲ್ ಫರೀದ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ.
ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಯನ್ನ ಬಂಧಿಸಿದ್ದರು. ಸರ್ಕಾರದ ಪರ ವಕೀಲ ಚೆನ್ನಪ್ಪ. ಜಿ .ಹರಸೂರ ವಾದವನ್ನ ಮಂಡಿಸಿದ್ದರು.