Asianet Suvarna News Asianet Suvarna News

ಹಾಲಪ್ಪಗೆ ಟಿಕೆಟ್ ಕೊಟ್ಟರೂ ಅವರ ಪರ ಕೆಲಸ ಮಾಡುತ್ತೇನೆ: ಬೇಳೂರು ಗೋಪಾಲಕೃಷ್ಣ

ಸಾಗರದಲ್ಲಿ  ಬಿಜೆಪಿ ಟಿಕೆಟ್ ಹಂಚಿಕೆ ವಿಚಾರವಾಗಿ  ಬೇಳೂರು  ಗೋಪಾಲಕೃಷ್ಣ  V/S ಹರತಾಳು ಹಾಲಪ್ಪ ನಡುವೆ ಸ್ಪರ್ಧೆ ಏರ್ಪಟ್ಟಿದೆ. 

Beluru Gopala Krishna Response on Ticket Issue

ಶಿವಮೊಗ್ಗ (ಮಾ. 31): ಸಾಗರದಲ್ಲಿ  ಬಿಜೆಪಿ ಟಿಕೆಟ್ ಹಂಚಿಕೆ ವಿಚಾರವಾಗಿ  ಬೇಳೂರು ಗೋಪಾಲಕೃಷ್ಣ V/S ಹರತಾಳು ಹಾಲಪ್ಪ ನಡುವೆ ಸ್ಪರ್ಧೆ ಏರ್ಪಟ್ಟಿದೆ. 

ಸಾಗರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಬಗ್ಗೆ ಮಾಹಿತಿ ಇಲ್ಲ ಎಂದು  ಬೇಳೂರು ಗೋಪಾಲ ಕೃಷ್ಣ ಹೇಳಿದ್ದಾರೆ.  ನನಗೆ ಟಿಕೆಟ್ ಕೊಟ್ಟರೂ,  ಕೊಡದಿದ್ದರೂ ಬಿಜೆಪಿ ಪಕ್ಷದಲ್ಲೆ ಇರುತ್ತೇನೆ.  ಹರತಾಳು ಹಾಲಪ್ಪಗೆ ಟಿಕೆಟ್ ಕೊಟ್ಟರೂ ಅವರ ಪರ ಕೆಲಸ ಮಾಡುತ್ತೇನೆ.   ಬೇಳೂರು ನಿಂತ ನೀರಲ್ಲ, ಹಾಗಾಗಿ ಬೇರೆ ಪಕ್ಷದವರು ಕರೆಯುತ್ತಿದ್ದಾರೆ ಎಂದಿದ್ದಾರೆ. 

ಸಾಗರದಲ್ಲಿ ಸಮೀಕ್ಷೆ ಆಧಾರದ ಮೇಲೆ ಟಿಕೆಟ್ ನೀಡುವುದಾಗಿ ಹೇಳಿದ್ದಾರೆ.  ಬೇಳೂರು ಗೋಪಾಲಕೃಷ್ಣ  ಸ್ನೇಹಮಯಿ, ಯಾರಿಗೂ ದುಷ್ಮನ್ ಅಲ್ಲ.  ನನಗೆ ಟಿಕೆಟ್ ಕೊಟ್ಟರೂ  ಕೊಡದಿದ್ದರೂ ಬಿಜೆಪಿ ಪಕ್ಷದಲ್ಲೇ  ಇರುತ್ತೇನೆ  ಎಂದಿದ್ದಾರೆ. 

Follow Us:
Download App:
  • android
  • ios