ಇರ್ಫಾನ್' ಪಠಾಣ್'ಗೆ ಶಾಕ್ ನೀಡಿದ ಬಿಸಿಸಿಐ: ನಿರಾಕ್ಷೇಪಣ ಪತ್ರ ರದ್ದು !
ಮುಂಬೈ(ಮೇ.21): ಭಾರತದ ಆಲ್ರೌಂಡರ್ ಇರ್ಫಾನ್ ಪಠಾಣ್ಗೆ 2017ರ ಬಹರೇನ್ ಕ್ರಿಕೆಟ್ ಹಬ್ಬ ಪ್ರದರ್ಶನ ಟಿ20 ಪಂದ್ಯದಲ್ಲಿ ಆಡಲು ನೀಡಿದ್ದ ನಿರಾಕ್ಷೇಪಣ ಪತ್ರವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೊನೆ ಘಳಿಗೆಯಲ್ಲಿ ಹಿಂಪಡೆದ ಘಟನೆ ಬೆಳಕಿಗೆ ಬಂದಿದೆ. ಪಂದ್ಯದಲ್ಲಿ ಭಾಗವಹಿಸಲೆಂದು ಪಠಾಣ್, ಬಹರೇನ್ಗೆ ತೆರಳಿದ್ದರು. ಅಷ್ಟೇ ಅಲ್ಲ, ಪತ್ರಿಕಾ ಗೋಷ್ಠಿಯಲ್ಲೂ ಪಾಲ್ಗೊಂಡಿದ್ದರು. ಆದರೆ ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದಾಗ ಅನಿರ್ದಿಷ್ಟಕಾರಣಗಳನ್ನು ನೀಡಿ ಬಿಸಿಸಿಐ ಅವರಿಗೆ ಅನುಮತಿ ನಿರಾಕರಿಸಿದೆ.
