ಇಂದು ಗೌರಿ ಹಬ್ಬ.. ನಾಳೆ ಗಣೇಶ ಚತುರ್ಥಿ..: ಹಬ್ಬಕ್ಕೆ ನಿಯಮಗಳನ್ನು ರೂಪಿಸಿದ ಬಿಬಿಎಂಪಿ
ಇಂದು ಗೌರಿ ಹಬ್ಬ. ನಾಳೆ ಗಣೇಶ ಚಥುರ್ತಿ. ಜನ ಹಬ್ಬಕ್ಕೆ ಅದ್ದೂರಿಯಾಗೇ ತಯಾರಿ ಮಾಡ್ಕೊಂಡಿದ್ದಾರೆ. ಹಾಗೇನೆ ಇತ್ತ ಪಾಲಿಕೆ ಕೂಡ ಹಬ್ಬಕ್ಕೆ ಒಂದಿಷ್ಟು ನಿಯಮಗಳನ್ನ ರೂಪಿಸಿದೆ. ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಪಾಲಿಕೆ ರೂಪಿಸಿರೋ ನಿಯಮಳೇನು? ಇಲ್ಲಿದೆ ಸಂಪೂರ್ಣ ವಿವರ
ಬೆಂಗಳೂರು(ಆ.24): ಇಂದು ಗೌರಿ ಹಬ್ಬ. ನಾಳೆ ಗಣೇಶ ಚಥುರ್ತಿ. ಜನ ಹಬ್ಬಕ್ಕೆ ಅದ್ದೂರಿಯಾಗೇ ತಯಾರಿ ಮಾಡ್ಕೊಂಡಿದ್ದಾರೆ. ಹಾಗೇನೆ ಇತ್ತ ಪಾಲಿಕೆ ಕೂಡ ಹಬ್ಬಕ್ಕೆ ಒಂದಿಷ್ಟು ನಿಯಮಗಳನ್ನ ರೂಪಿಸಿದೆ. ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಪಾಲಿಕೆ ರೂಪಿಸಿರೋ ನಿಯಮಳೇನು? ಇಲ್ಲಿದೆ ಸಂಪೂರ್ಣ ವಿವರ
ಈ ನಿಯಮಗಳ ಪಾಲನೆ ಕಡ್ಡಾಯ!
-ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆ
-ಪ್ಲಾಸ್ಟಿಕ್, ಬ್ಯಾನರ್ಗಳನ್ನು ಬಳಸುವಂತಿಲ್ಲ
-ರಾತ್ರಿ 10.30ರ ನಂತರ ಧ್ವನಿವರ್ಧಕ, ಪಟಾಕಿಗೆ ನಿಷೇಧ
-ನಿಗದಿಪಡಿಸಿದ ಸ್ಥಳಗಳಲ್ಲೇ ಗಣೇಶ ವಿಸರ್ಜನೆ
-ವಿಸರ್ಜನೆ ವೇಳೆ ಹಸಿಕಸ, ಒಣ ಕಸ ವಿಂಗಡಿಸಬೇಕು
ಗಣೇಶ ವಿಸರ್ಜನಗೆ ಎಲ್ಲೆಲ್ಲಿ ಅವಕಾಶ?
-ಹಲಸೂರು, ಸ್ಯಾಂಕಿ, ಯಡಿಯೂರು, ಹೆಬ್ಬಾಳ,
-ಸಾರಕ್ಕಿ ಕೆರೆ ಸೇರಿದಂತೆ 36 ಕೆರೆಗಳಲ್ಲಿ ಅವಕಾಶ
-ಮಾಲಿನ್ಯ ಮಂಡಳಿಯಿಂದ 40 ಮೊಬೈಲ್ ಟ್ಯಾಂಕರ್ ವ್ಯವಸ್ಥೆ
-ಬಿಬಿಎಂಪಿ ಕಡೆಯಿಂದ 250 ಮೊಬೈಲ್ ಟ್ಯಾಂಕರ್
ಆದಷ್ಟು ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆ ಮಾಡಿ ಎಂದು ಜನ ಜಾಗೃತಿ ಮೂಡಿಸಿದ್ರೂ. ಪಿಒಪಿ ಗಣೇಶ ಬಳಕೆಗೆ ಕಡಿವಾಣ ಬಿದ್ದಿಲ್ಲ. ಹೀಗಘಾಇ ಈ ಬಾರಿ ಪಾಲಿಕೆ ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದು.. ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆಗೆ ಕರೆ ನೀಡಿದೆ.