ಶಬರಿಮಲೆ ದೇಗುಲದ ಮುಂದಿನ ಅಶ್ವತ್ಥ ಮರದ ರೆಂಬೆಗೆ ಬೆಂಕಿ

ಶಬರಿಮಲೆ[ಜ.07]: ಇಲ್ಲಿನ ಆಯ್ಯಪ್ಪ ದೇಗುಲಕ್ಕೆ ಋುತುಮತಿ ವಯಸ್ಸಿನ ಮಹಿಳೆಯರ ಪ್ರವೇಶ ಕೇರಳದಾದ್ಯಂತ ಭಾರೀ ಹಿಂಸಾಚಾರಕ್ಕೆ ಕಾರಣವಾಗಿರುವ ಬೆನ್ನಲ್ಲೇ, ದೇಗುಲ ಮುಂದೆ ಇರುವ ಅಶ್ವತ್ಥ ಮರದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Add Asianetnews Kannada as a Preferred SourcegooglePreferred

ಶಬರಿಗೆಮಲೆಗೆ ಮೂರಲ್ಲ 10 ಮಹಿಳೆಯರ ಪ್ರವೇಶ!

ದೇಗುಲದ ಮುಂದೆ ಇರುವ 18 ಮೆಟ್ಟಿಲುಗಳ ಸಮೀಪದಲ್ಲೇ ಈ ಅಶ್ವತ್ಥ ಮರದ ಇದೆ. ಮೆಟ್ಟಿಲು ಹತ್ತುವ ಮುನ್ನ ಭಕ್ತರು ಮರಕ್ಕೆ ನಮಸ್ಕರಿಸಿಯೇ ಮುಂದುವರೆಯುತ್ತಾರೆ. ಈ ಮರದ ಪಕ್ಕದಲ್ಲೇ ದೊಡ್ಡ ಅಗ್ನಿಕುಂಡವಿದೆ. ಭಕ್ತರು ತಾವು ತಂದ ತೆಂಗಿನಕಾಯಿ ಮತ್ತು ತುಪ್ಪವನ್ನು ಈ ಅಗ್ನಿಕುಂಡಕ್ಕೆ ಅರ್ಪಿಸುತ್ತಾರೆ. ಹೀಗಾಗಿ ಈ ಪ್ರದೇಶದಲ್ಲಿ ಸದಾ ಬೆಂಕಿ ಇರುತ್ತದೆ. ಆದರೆ ಈ ಬೆಂಕಿ ಎಂದಿಗೂ ಮರಕ್ಕೆ ಹತ್ತಿಕೊಂಡ ಉದಾಹರಣೆ ಇಲ್ಲ.

ಶಬರಿಮಲೆ ಪ್ರವೇಶಿಸಿದ ಮಹಿಳೆಯರು ಮತ್ತು ಇನ್ವಿಸಿಬಲ್ ಗೋರಿಲ್ಲಾ!

ಆದರೆ ಇದೀಗ ಆಕಸ್ಮಿಕವಾಗಿ ಅಶ್ವತ್ಥ ಮರಕ್ಕೆ ಬೆಂಕಿ ಹತ್ತಿಕೊಂಡಿದ್ದು, ಅದನ್ನು ದೇಗುಲದ ಸಿಬ್ಬಂದಿ ನಂದಿಸಿದ್ದಾರೆ. ಈ ಬೆಂಕಿ ನಂದಿಸುವ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗಿದೆ. ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಮತ್ತು ಮಹಿಳೆಯರು ದೇಗುಲ ಪ್ರವೇಶಿಸಿದ್ದರಿಂದಲೇ ಈ ಅಪಶಕುನ ಸಂಭವಿಸಿದೆ ಎಂದು, ಮಹಿಳೆಯರ ಪ್ರವೇಶ ವಿರೋಧಿಸುವ ಗುಂಪು ವಾದಿಸುತ್ತಿದೆ.