ಹತ್ತಕ್ಕೂ ಹೆಚ್ಚು ಬ್ಯಾನರ್'ಗಳನ್ನ ಬಸ್ ಸ್ಟಾಪ್ ಹಾಗೂ ಅನೇಕ ಪ್ರಮುಖ ಸ್ಥಳಗಳಲ್ಲಿ ಕಳೆದ ರಾತ್ರಿ ಹಾಕಿದ್ದಾರೆ.  ಸ್ಥಳಕ್ಕೆ ಎನ್.ಎನ್.ಎಫ್ ತಂಡ ಹಾಗೂ ಶೃಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.    

ಚಿಕ್ಕಮಗಳೂರು: ನಕ್ಸಲೀಯರ ಬ್ಯಾನರ್ ಹಾಗೂ ಕರಪತ್ರ ಪತ್ತೆಯಾಗಿರುವ ಘಟನೆ ಶೃಂಗೇರಿ ತಾಲೂಕಿನ ಬುಕ್ಕಡಿಬೈಲು ಗ್ರಾಮದಲ್ಲಿ ವರದಿಯಾಗಿದೆ. ಬ್ಯಾನರ್ ಹಾಕಿರುವ ನಕ್ಸಲರು ಕಸ್ತೂರಿ ರಂಗನ್ ವರದಿ, ಹುಲಿ ಯೋಜನೆ ವಿರೋಧಿಸಿ ಬ್ಯಾನರ್'ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ನಮ್ಮ ಹೋರಾಟ ನಿಲ್ಲಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ, ಕೇಂದ್ರ ಸರ್ಕಾರ ನೋಟು ಬ್ಯಾನ್ ಹಾಗೂ ಜಿಎಸ್'ಟಿ ಮೂಲಕ ಜನರನ್ನ ಸಂಕಷ್ಟಕ್ಕೆ ಸಿಲುಕಿಸಿರುವ ಕೇಂದ್ರ ಸರ್ಕಾರದ ವಿರುದ್ಧ ನಕ್ಸಲರು ಬ್ಯಾನರ್'ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಹತ್ತಕ್ಕೂ ಹೆಚ್ಚು ಬ್ಯಾನರ್'ಗಳನ್ನ ಬಸ್ ಸ್ಟಾಪ್ ಹಾಗೂ ಅನೇಕ ಪ್ರಮುಖ ಸ್ಥಳಗಳಲ್ಲಿ ಕಳೆದ ರಾತ್ರಿ ಹಾಕಿದ್ದಾರೆ. ಸ್ಥಳಕ್ಕೆ ಎನ್.ಎನ್.ಎಫ್ ತಂಡ ಹಾಗೂ ಶೃಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.