ತಾಯಿಯನ್ನು ನೋಡಲು ಮಾನವೀಯ ದೃಷ್ಟಿಯಿಂದ ಪಾತಕಿ ಬನ್ನಂಜೆ ರಾಜನನ್ನು ಉಡುಪಿ ಕರೆತರಲಾಗಿದ್ದು, ಅನಾರೋಗ್ಯ ಪೀಡಿತ ತಾಯಿಯನ್ನು ಇಂದು ಭೇಟಿ ಮಾಡಿದ್ದಾರೆ. 

ಉಡುಪಿ :  ಹಿಂಡಲಗಾ ಜೈಲಿನಲ್ಲಿರುವ ಖೈದಿಯಾಗಿರುವ ಬನ್ನಂಜೆ ರಾಜ ಇಂದು ಉಡುಪಿಗೆ ಆಗಮಿಸಿ ತಮ್ಮ ತಾಯಿಯನ್ನು ಭೇಟಿ ಮಾಡಿದ್ದಾರೆ. ಮಲ್ಪೆ ಸಮೀಪದಲ್ಲಿರುವ ಸ್ವಗೃಹಕ್ಕೆ ಅವರ ತಾಯಿಯನ್ನು ನೋಡುವ ಸಲುವಾಗಿ ಪೊಲೀಸರು ರಾಜಾ ಅವರನ್ನು ಕರೆತಂದಿದ್ದರು.

Add Asianetnews Kannada as a Preferred SourcegooglePreferred

ನಿನ್ನೆಯಷ್ಟೇ ಹಿಂಡೆಲಗಾ ಜೈಲಿನಿಂದ ರಾಜನನ್ನು ಉಡುಪಿಗೆ ಕರೆತರಲಾಗಿದ್ದು, ಇಂದು ನಿವಾಸಕ್ಕೆ ಆಗಮಿಸಿ ತಾಯಿ ವಿಲಾಸಿನಿ ಶೆಟ್ಟಿಗಾರ್ ಅವರನ್ನು ಭೇಟಿ ಮಾಡಿದ್ದಾರೆ. ರಾಜಾ ಆಗಮನದ ಹಿನ್ನೆಲೆಯಲ್ಲಿ ಮನೆಯ ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು. 

ರಾಜನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಈ ನಿಟ್ಟಿನಲ್ಲಿ ಪೊಲೀಸ್ ಭದ್ರತೆಯಲ್ಲೇ ತಾಯಿ ಮನೆಗೆ ಆಗಮಿಸಲಿದ್ದರು. 

ಮಾನವೀಯ ನೆಲೆಯಲ್ಲಿ ಮನೆ ಭೇಟಿಗೆ ನ್ಯಾಯಾಲಯವು ಅವಕಾಶ ನೀಡಲಾಗಿದ್ದು, ಸದ್ಯ ವಿಚಾರಣಾಧೀನ‌ ಖೈದಿಯಾಗಿ ಹಿಂಡಲಗಾ ಜೈಲಿನಲ್ಲಿರುವ ರಾಜ, ಹದಿನೈದು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.