ನಾಳೆ ಬ್ಯಾಂಕ್'ಗಿಲ್ಲ ರಜೆ; ಎಂದಿನಂತೆ ಕಾರ್ಯ ನಿರ್ವಹಿಸಲಿವೆ
ನಾಳೆ ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಬ್ಯಾಂಕ್'ಗಳಿಗೆ ರಜೆಯಿರುವುದಿಲ್ಲ. ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.
ಬೆಂಗಳೂರು (ಜ.24): ನಾಳೆ ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಬ್ಯಾಂಕ್'ಗಳಿಗೆ ರಜೆಯಿರುವುದಿಲ್ಲ. ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.
ಮಹದಾಯಿ ನೀರಿಗಾಗಿ ಆಗ್ರಹಿಸಿ ರಾಜ್ಯ ಬಂದ್ ಹಿನ್ನೆಲೆ ಬ್ಯಾಂಕ್'ಗಳ ಒಕ್ಕೂಟದಿಂದ ನೈತಿಕ ಬೆಂಬಲ ಪರಿಸ್ಥಿತಿ ನೋಡಿಕೊಂಡು ಬ್ಯಾಂಕ್'ಗಳಿಗೆ ರಜೆ ಘೋಷಣೆ ಮಾಡಲಾಗುತ್ತದೆ. ಸಾರಿಗೆ ಸಂಪರ್ಕ ಇಲ್ಲದೆ ಇದ್ರೆ ರಜೆ ಘೋಷಣೆ ಮಾಡಲಾಗುತ್ತದೆ. ಆದರೆ ಬ್ಯಾಂಕ್'ಗಳನ್ನು ಕ್ಲೋಸ್ ಮಾಡದಿರಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಬ್ಯಾಕುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಬ್ಯಾಂಕ್ ಯೂನಿಯನ್ ಕಾರ್ಯದರ್ಶಿ ನಾಗರಾಜ್ ಸುವರ್ಣ ನ್ಯೂಸ್'ಗೆ ಹೇಳಿದ್ದಾರೆ.