Asianet Suvarna News Asianet Suvarna News

ಬೆಂಗ್ಳೂರು-ಮಂಗ್ಳೂರು ರೈಲು ಸಂಚಾರ ಪುನಾರಂಭ

ಭಾರೀ ಮಳೆ ಸುರಿದು ಭೂಮಿ ಕುಸಿದ ಪರಿಣಾಮ ಭೂಮಿ ಕುಸಿದ ಪರಿಣಾಮ ನಿಲ್ಲಿಸಲಾಗಿದ್ದ ಬೆಂಗಳೂರು ಮಂಗಳೂರು ರೈಲು ಸಂಚಾರ ಮತ್ತೆ ಆರಂಭವಾಗಿದೆ. 

Bangalore Mangalore Train Service Begins
Author
Bengaluru, First Published Jul 26, 2019, 9:11 AM IST

ಸಕಲೇಶಪುರ [ಜು.26]: ಇಲ್ಲಿಗೆ ಸಮೀಪದ ಸಿರಿಬಾಗಿಲು ಪ್ರದೇಶದಲ್ಲಿ ಉಂಟಾಗಿದ್ದ ಭೂಕುಸಿತದಿಂದಾಗಿ ರದ್ದಾಗಿದ್ದ ಬೆಂಗಳೂರು-ಮಂಗಳೂರು ರೈಲುಗಳ ಸಂಚಾರ ಗುರುವಾರದಿಂದ ಪುನರ್‌ ಆರಂಭಿಸಲಾಗಿದೆ. 

ಸಿರಿಬಾಗಿಲು ಸಮೀಪದ 86ನೇ ಮೈಲುಗಲ್ಲಿನ ಸುರಂಗದ ಸಮೀಪ ರೈಲು ಹಳಿಗಳ ಮೇಲೆ ಶನಿವಾರ ಮುಂಜಾನೆ ಬಂಡೆ, ಮಣ್ಣು ರಾಶಿಯಾಗಿ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ರೈಲುಗಳ ಸಂಚಾರವನ್ನು ರದ್ದುಪಡಿಸಿ ತೆರವು ಕಾರ್ಯಾಚರಣೆ ಆರಂಭಿಸಲಾಗಿತ್ತು. 

ಸುಮಾರು 80ಕ್ಕೂ ಹೆಚ್ಚು ಸಿಬ್ಬಂದಿ ಸತತ 5 ದಿನ ನಡೆಸಿದ ಕಾರ್ಯಾಚರಣೆ ನಂತರ ಗುರುವಾರ ಮುಂಜಾನೆಯಿಂದ ರೈಲು ಸಂಚಾರ ಪುನರ್‌ ಆರಂಭವಾಗಿದೆ.

Follow Us:
Download App:
  • android
  • ios