ಪೊಲೀಸರ ಪ್ಲಾನ್​​ ಬುಡುಮೇಲು ಮಾಡಲು ರೌಡಿಗಳು ಪ್ರತಿತಂತ್ರ ನಡೆಸುವ ವೇಳೆ   ರೌಡಿಗಳ ಪ್ಲಾನ್​ ನನ್ನು  ಬೆಂಗಳೂರು ಪೊಲೀಸರು  ​ ವಿಫಲಗೊಳಿಸಿದ್ದಾರೆ. 

ಬೆಂಗಳೂರು ಅಂಡರ್​​ವರ್ಲ್ಡ್​​ ಮಟ್ಟಹಾಕಲು ಪೊಲೀಸರು ಪ್ಲಾನ್ ಮಾಡ್ತಿದ್ದರೆ , ​ಬೆಂಗಳೂರು ಪೊಲೀಸರ ಮೇಲೆ ದಾಳಿ ಮಾಡಲು ರೌಡಿಗಳು ಸಂಚು ರೂಪಿಸಿದ್ದರು. ಪೊಲೀಸರ ಪ್ಲಾನ್​​ ಬುಡುಮೇಲು ಮಾಡಲು ರೌಡಿಗಳು ಪ್ರತಿತಂತ್ರ ನಡೆಸುವ ವೇಳೆ ರೌಡಿಗಳ ಪ್ಲಾನ್​ ನನ್ನು ಬೆಂಗಳೂರು ಪೊಲೀಸರು ​ ವಿಫಲಗೊಳಿಸಿದ್ದಾರೆ. ಬೆಂಗಳೂರಿನ ಹೊರವಲಯದ ಅಪಾರ್ಟ್​​ಮೆಂಟ್​​ ವೊಂದರಲ್ಲಿ 20 ಕ್ಕೂ ಹೆಚ್ಚು ರೌಡಿಗಳು ಪೊಲೀಸರ ಮೇಲೆ ಅಟ್ಯಾಕ್​ ಮಾಡಲು ಮೀಟಿಂಗ್​ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 16 ರೌಡಿಗಳು ಪರಾರಿಯಾಗಿ ನಾಲ್ವರು ಮಾತ್ರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಅಗ್ನಿ ಶ್ರೀಧರ್​​ ಮನೆ ಮೇಲೆ ದಾಳಿಯಾದ ಹಿನ್ನೆಲೆಯಲ್ಲಿ ರೌಡಿಗಳು , ​ ಬೆಂಗಳೂರಲ್ಲಿ ಶಾಂತಿ ಕದಡುವುದು ಮತ್ತು ಪೊಲೀಸರನ್ನ ಟಾರ್ಗೆಟ್​​ ಮಾಡುವ ಬಗ್ಗೆ ಚರ್ಚೆ ನಡೆಸಿತ್ತಿದ್ದರು .