ಎಲೆಯಡಿಕೆ, ಗುಟ್ಕಾಗೆ ಪುರಿ ದೇಗುದಲ್ಲಿ ನಿಷೇಧ: ಉಲ್ಲಂಘಿಸಿದ್ರೆ ದಂಡ
ಬಾಯಿ ಸ್ವಚ್ಛವಾಗಿಟ್ಟುಕೊಂಡೇ ದೇವಸ್ಥಾನ ಪ್ರವೇಶಿಸಬೇಕು| ಎಲೆಯಡಿಕೆ, ಗುಟ್ಕಾಗೆ ಪುರಿ ದೇಗುದಲ್ಲಿ ನಿಷೇಧ: ಉಲ್ಲಂಘಿಸಿದ್ರೆ 500 ದಂಡ|
ಭುವನೇಶ್ವರ[ಜು.31]: ತಾಂಬೂಲ ಅಥವಾ ಎಲೆ-ಅಡಿಕೆ ಮೆಲ್ಲುವುದು ಭಾರತದಲ್ಲಿ ಸಾಮಾನ್ಯ ಚಟ. ಇದರ ಜತೆಗೆ ಗುಟ್ಕಾ ಮತ್ತು ತಂಬಾಕು ಕೂಡ ಸೇರಿಕೊಂಡಿದ್ದು, ಈ ಚಟ ಉಳ್ಳವರು ಎಲ್ಲೆಂದರಲ್ಲಿ ಉಗುಳಿ ಅಂದಗೆಡಿಸುವುದು ಸಾಮಾನ್ಯ ಎನ್ನುವಂತಾಗಿದೆ. ಇದು ಜಗತ್ ಪ್ರಸಿದ್ಧ ಜಗನ್ನಾಥ ದೇವಸ್ಥಾನದ ಅಂದಕ್ಕೂ ಸಂಚಕಾರ ತಂದಿದೆ.
ಅದಕ್ಕಾಗಿ ದೇವಸ್ಥಾನ ಆಡಳಿತ ಮಂಡಳಿ ಇದೀಗ ಕ್ರಮಕ್ಕೆ ಮುಂದಾಗಿದ್ದು, ಬಾಯಿ ಸ್ವಚ್ಛವಾಗಿಟ್ಟುಕೊಂಡೇ ದೇವಸ್ಥಾನ ಪ್ರವೇಶಿಸಬೇಕು. ದೇವಸ್ಥಾನದ ಆವರಣದಕಲ್ಲಿ ಎಲೆ-ಅಡಿಕೆ, ಗುಟ್ಕಾ ಮತ್ತು ತಂಬಾಕು ಉಗುಳಿದ್ದ ಕಂಡು ಬಂದರೆ 500 ರೂ ದಂಡ ಫಿಕ್ಸ್.
ಈಗಾಗಲೇ ದೇವಸ್ಥಾನದ ಎಲ್ಲೆಡೆ ಸಿಸಿ ಕ್ಯಾಮೆರಾ ಅಳವಡಿಸಿದ್ದು, ಆ.1ರಿಂದಲೇ ಎಲೆ-ಅಡಿಕೆ, ಗುಟ್ಕಾ ಮತ್ತು ತಂಬಾಕು ಹಾಕಿಕೊಂಡು ದೇವಸ್ಥಾನದ ಆವರಣ ಪ್ರವೇಶಕ್ಕೆ ನಿಷೇಧ ಹೇರಿದೆ.