ನಟ ಪ್ರಕಾಶ್ ರೈ​ಗೆ ಡಾ. ಶಿವರಾಂ ಕಾರಂತ್ ಪ್ರಶಸ್ತಿ ನೀಡುತ್ತಿರುವುದಕ್ಕೆ ಬಜರಂಗದಳ ವಿರೋಧ ವ್ಯಕ್ತಪಡಿಸಿದೆ. ಸಂಘ ಪರಿವಾರ ಗೌರಿ ಹತ್ಯೆ ಮಾಡಿದೆ ಎಂದು ಪ್ರಕಾಶ್ ರೈ ಹೇಳಿಕೆ ಖಂಡನೀಯವಾಗಿದ್ದು, ಪ್ರಕಾಶ್ ರೈ  ಕಾಂಗ್ರೆಸ್​ ಏಜಂಟ್'ನಂತೆ ವರ್ತನೆ ಮಾಡಿ, ಅನಗತ್ಯವಾಗಿ ಪ್ರಧಾನಿ ಮೋದಿ ಹೆಸರು ಪ್ರಸ್ತಾಪ ಮಾಡಿದ್ದಾರೆ ಎಂದು ಬಜರಂಗದಳ ಆರೋಪಿಸಿದೆ.  

ಬೆಂಗಳೂರು (ಅ.06): ನಟ ಪ್ರಕಾಶ್ ರೈ​ಗೆ ಡಾ. ಶಿವರಾಂ ಕಾರಂತ್ ಪ್ರಶಸ್ತಿ ನೀಡುತ್ತಿರುವುದಕ್ಕೆ ಬಜರಂಗದಳ ವಿರೋಧ ವ್ಯಕ್ತಪಡಿಸಿದೆ. ಸಂಘ ಪರಿವಾರ ಗೌರಿ ಹತ್ಯೆ ಮಾಡಿದೆ ಎಂದು ಪ್ರಕಾಶ್ ರೈ ಹೇಳಿಕೆ ಖಂಡನೀಯವಾಗಿದ್ದು, ಪ್ರಕಾಶ್ ರೈ ಕಾಂಗ್ರೆಸ್​ ಏಜಂಟ್'ನಂತೆ ವರ್ತನೆ ಮಾಡಿ, ಅನಗತ್ಯವಾಗಿ ಪ್ರಧಾನಿ ಮೋದಿ ಹೆಸರು ಪ್ರಸ್ತಾಪ ಮಾಡಿದ್ದಾರೆ ಎಂದು ಬಜರಂಗದಳ ಆರೋಪಿಸಿದೆ.

ಪ್ರಚಾರದ ಗೀಳಿಗಾಗಿ ಪ್ರಕಾಶ್ ರೈ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎಂದು ಬಜರಂಗದಳ ಆರೋಪಿಸಿದೆ. ಕಮ್ಯೂನಿಷ್ಟ್​ ಪಕ್ಷದ ವೇದಿಕೆಗಳಲ್ಲಿ ದೇಶ ವಿರೋಧಿ ಹೇಳಿಕೆ ನೀಡಿದ್ದು, ಡಾ. ಶಿವರಾಂ ಕಾರಂತರ ಪ್ರಶಸ್ತಿ ಪಡೆಯುವ ಅರ್ಹತೆಯನ್ನ ಪ್ರಕಾಶ್ ರೈ ಹೊಂದಿಲ್ಲ. ಆದ್ದರಿಂದ ಕಾರಂತ ಪ್ರಶಸ್ತಿಯನ್ನು ಯಾವುದೇ ಕಾರಣಕ್ಕೂ ಪ್ರಕಾಶ್ ರೈಗೆ ಕೊಡಬಾರದು ಎಂದು ಬಜರಂಗದಳ ಆಗ್ರಹಿಸಿದೆ.