ಹಲವು ಎಡವಟ್ಟುಗಳಿಂದಲೇ ಸುದ್ದಿಯಾಗಿದ್ದ  ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಮತ್ತೊಂದು ಎಡವಟ್ಟು ಬಯಲಾಗಿದೆ.

ಬೆಂಗಳೂರು (ನ.03): ಹಲವು ಎಡವಟ್ಟುಗಳಿಂದಲೇ ಸುದ್ದಿಯಾಗಿದ್ದ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಮತ್ತೊಂದು ಎಡವಟ್ಟು ಬಯಲಾಗಿದೆ.

ಪರಿವರ್ತನಾ ರ್ಯಾಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಅವರಿಗೆ ಭಗ್ನಗೊಂಡ ಸ್ಮರಣಿಗಳನ್ನು ನೀಡಿ, ರಾಷ್ಟ್ರೀಯ ನಾಯಕನನ್ನೇ ಯಾಮಾರಿಸಿದ್ದಾರೆ. ಜತೆಗೆ ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್​ ಯಡಿಯೂರಪ್ಪಗೆ ನೀಡಿದ ಸ್ಮರಣಿಕೆಯಲ್ಲಿ ಎತ್ತಿನಗಾಡಿ ಇರದೇ ಬರೀ ಎತ್ತುಗಳನ್ನು ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಸ್ಮರಣಿಕೆಗಳು ಮಾಜಿ ಕಾರ್ಪೋರೇಟರೊಬ್ಬರ ಕಾಲ್ತುಳಿತದಿಂದ ಭಗ್ನಗೊಂಡಿದ್ದವು. ಇದನ್ನು ಮರೆಮಾಚಿದ ಆಯೋಜಕರು ಭಗ್ನಗೊಂಡ ಸ್ಮರಣಿಕೆ ನೀಡಿ, ಕೈ ತೊಳೆದುಕೊಂಡಿದ್ದಾರೆ.