ರಾಮಮಂದಿರ ನಿರ್ಮಾಣ ಘೋಷಣೆಗೆ ಆಗ್ರಹಿಸಿ ಶ್ರೀಗಳ ಉಪವಾಸ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಬೇಕು. ಇದಕ್ಕಾಗಿ ಅವರು ಅಯೋಧ್ಯೆಗೆ ಆಗಮಿಸಬೇಕು ಎಂದು ಒತ್ತಾಯಿಸಿ ಅಯೋಧ್ಯೆಯ ಮಹಾಂತ ರಾಮ ಪರಮಹಂಸ ಶ್ರೀಗಳು ಉಪವಾಸ ಸತ್ಯಾ ಗ್ರಹ ಆರಂಭಿಸಿದ್ದಾರೆ.
ಲಖನೌ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಬೇಕು.
ಇದಕ್ಕಾಗಿ ಅವರು ಅಯೋಧ್ಯೆಗೆ ಆಗಮಿಸಬೇಕು ಎಂದು ಒತ್ತಾಯಿಸಿ ಅಯೋಧ್ಯೆಯ ಮಹಾಂತ ರಾಮ ಪರಮಹಂಸ ಶ್ರೀಗಳು ಉಪವಾಸ ಸತ್ಯಾ ಗ್ರಹ ಆರಂಭಿಸಿದ್ದಾರೆ.
ಅವರಿಗೆ ವಿವಿಧ ಧಾರ್ಮಿ ಕ ಸಂಘಟನೆಗಳು ಬೆಂಬಲ ಘೋಷಿಸಿವೆ. ರಾಮ ಲಲ್ಲಾ ಆಶಿರ್ವಾದದಿಂದಲೇ ಕಳೆದ ಬಾರಿ ಬಿಜೆಪಿ ಭಾರೀ ಬಹುಮತ ಗಳಿಸಿತು.
ಈ ಕಾರಣಕ್ಕಾಗಿ ಮೋದಿ ರಾಮಲಲ್ಲಾಗೆ ಭೇಟಿ ನೀಡಿ, ರಾಮ ಮಂದಿರ ನಿರ್ಮಾಣದ ಘೋಷಣೆ ಮಾಡಬೇಕು ಎಂದು ಶ್ರೀಗಳು ಆಗ್ರಹಿಸಿದರು.