ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ವೀಸಾ ವಿಚಾರದಲ್ಲಿ ತಾರತಮ್ಯ ಮಾಡುತ್ತಾರೆಂದು ಕೇಳಿ ಬಂದಿರುವ ಆರೋಪಕ್ಕೆ, ಪ್ರತ್ಯುತ್ತರವಾಗಿ ಭಾರತೀಯರೆಲ್ಲರೂ ನನ್ನ ಜನ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ನವದೆಹಲಿ (ಜ.21): ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ವೀಸಾ ವಿಚಾರದಲ್ಲಿ ತಾರತಮ್ಯ ಮಾಡುತ್ತಾರೆಂದು ಕೇಳಿ ಬಂದಿರುವ ಆರೋಪಕ್ಕೆ, ಪ್ರತ್ಯುತ್ತರವಾಗಿ ಭಾರತೀಯರೆಲ್ಲರೂ ನನ್ನ ಜನ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ಸುಷ್ಮಾ ಸ್ವರಾಜ್ ರವರು ಕೇವಲ ಮುಸಲ್ಮಾನರಿಗೆ ವೀಸಾ ಕೊಡುವಾಗ ಮಾತ್ರ ಕಾಳಜಿ ವಹಿಸುತ್ತಾರೆ. ಆದರೆ ಹಿಂದೂಗಳು ಭಾರತಕ್ಕೆ ವೀಸಾ ತೆಗೆದುಕೊಳ್ಳುವಾಗ ಸತಾಯಿಸುತ್ತಾರೆ. ಮೋದಿಜಿ ಈ ವಿಚಾರದ ಬಗ್ಗೆ ಗಮನಹರಿಸಿ ಎಂದು ಹಿಂದೂ ಜಾಗರಣ ಸಂಘ ಆರೋಪಿಸಿದೆ. ಇದಕ್ಕೆ ಸುಷ್ಮಾ ಸ್ವರಾಜ್ ಪ್ರತಿಕ್ರಿಯಿಸಿ, ನನಗೆ ಜಾತಿ, ಧರ್ಮ ನನಗೆ ವಿಷಯವಾಗುವುದಿಲ್ಲ. ಭಾರತ ನನ್ನ ದೇಶ. ಇಲ್ಲಿಯವರೆಲ್ಲರೂ ನನ್ನ ಜನಗಳು ಎಂದು ಟ್ವಿಟಿಸಿದ್ದಾರೆ.
