ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್  ವೀಸಾ ವಿಚಾರದಲ್ಲಿ ತಾರತಮ್ಯ ಮಾಡುತ್ತಾರೆಂದು ಕೇಳಿ ಬಂದಿರುವ ಆರೋಪಕ್ಕೆ, ಪ್ರತ್ಯುತ್ತರವಾಗಿ ಭಾರತೀಯರೆಲ್ಲರೂ ನನ್ನ ಜನ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

ನವದೆಹಲಿ (ಜ.21): ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ವೀಸಾ ವಿಚಾರದಲ್ಲಿ ತಾರತಮ್ಯ ಮಾಡುತ್ತಾರೆಂದು ಕೇಳಿ ಬಂದಿರುವ ಆರೋಪಕ್ಕೆ, ಪ್ರತ್ಯುತ್ತರವಾಗಿ ಭಾರತೀಯರೆಲ್ಲರೂ ನನ್ನ ಜನ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಸುಷ್ಮಾ ಸ್ವರಾಜ್ ರವರು ಕೇವಲ ಮುಸಲ್ಮಾನರಿಗೆ ವೀಸಾ ಕೊಡುವಾಗ ಮಾತ್ರ ಕಾಳಜಿ ವಹಿಸುತ್ತಾರೆ. ಆದರೆ ಹಿಂದೂಗಳು ಭಾರತಕ್ಕೆ ವೀಸಾ ತೆಗೆದುಕೊಳ್ಳುವಾಗ ಸತಾಯಿಸುತ್ತಾರೆ. ಮೋದಿಜಿ ಈ ವಿಚಾರದ ಬಗ್ಗೆ ಗಮನಹರಿಸಿ ಎಂದು ಹಿಂದೂ ಜಾಗರಣ ಸಂಘ ಆರೋಪಿಸಿದೆ. ಇದಕ್ಕೆ ಸುಷ್ಮಾ ಸ್ವರಾಜ್ ಪ್ರತಿಕ್ರಿಯಿಸಿ, ನನಗೆ ಜಾತಿ, ಧರ್ಮ ನನಗೆ ವಿಷಯವಾಗುವುದಿಲ್ಲ. ಭಾರತ ನನ್ನ ದೇಶ. ಇಲ್ಲಿಯವರೆಲ್ಲರೂ ನನ್ನ ಜನಗಳು ಎಂದು ಟ್ವಿಟಿಸಿದ್ದಾರೆ.

Scroll to load tweet…