ಚುನಾವಣಾ ಹೊತ್ತಲ್ಲಿ ಅಶೋಕ್ ಖೇಣಿಗೆ ಮುಖಭಂಗ
ನಕಲಿ ಸಹಿ ಪ್ರಕರಣದಲ್ಲಿ ಶಾಸಕ ಅಶೋಕ್ ಖೇಣಿಗೆ ಭಾರಿ ಮುಖಭಂಗವಾಗಿದೆ.
ಬೆಂಗಳೂರು (ಏ. 03): ನಕಲಿ ಸಹಿ ಪ್ರಕರಣದಲ್ಲಿ ಶಾಸಕ ಅಶೋಕ್ ಖೇಣಿಗೆ ಭಾರಿ ಮುಖಭಂಗವಾಗಿದೆ.
ಚುನಾವಣೆ ಹೊತ್ತಲ್ಲಿ ಅಶೋಕ್ ಖೇಣಿಗೆ ಬಾರಿ ಹಿನ್ನಡೆಯಾಗಿದೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ದೂರು ಸಲ್ಲಿಸಿದ್ದಾರೆ.
ಬೀದರ್ ಜೆಎಂಎಫ್ ಸಿ ನ್ಯಾಯಾಲಯ ನೀಡಿದ್ದ ಸಮನ್ಸ್ ರದ್ದು ಕೋರಿ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ಸಲ್ಲಿಸಲಾಗಿತ್ತು. ಆದರೆ ದ ಕಲ್ಬುರ್ಗಿ ಹೈಕೋರ್ಟ್ ಅರ್ಜಿ ವಜಾಗೊಳಿಸಿದೆ. ನ್ಯಾಯಾಲಯಕ್ಕೆ ಹಾಜರಾಗಬೇಕು. ನಕಲಿ ಸಹಿಯನ್ನು ಖೇಣಿಯ ಇತರೆ ಸಹಿಯೊಂದಿಗೆ ಪರೀಶೀಲನೆ ನಡೆಸಬೇಕು. ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸಹಿಗಳ ಮಾದರಿಯನ್ನು ಕಳುಹಿಸಬೇಕು. 6 ತಿಂಗಳ ಒಳಗೆ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿ ಆದೇಶ ನೀಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.