ಗುರೀಂದರ್ 1997ರಲ್ಲಿ ಮೊಗಾ ಸಮೀಪ ಸಂಭವಿಸಿದ ಸ್ಫೋಟ ಪ್ರಕರಣವೊಂದರಲ್ಲಿ ಆರೋಪಿಯಾಗಿ ಬಳಿಕ ಖುಲಾಸೆಗೊಂಡಿದ್ದರು.

ಚಂಡೀಗಢ(ಜ.30): ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಚುನಾವಣಾ ಪ್ರಚಾರಕ್ಕೆಂದು ಆಗಮಿಸಿದ್ದ ವೇಳೆ ಮೊಗಾದಲ್ಲಿ ಮಾಜಿ ಉಗ್ರವಾದಿಯೊಬ್ಬರ ಮನೆಯಲ್ಲಿ ರಾತ್ರಿ ಕಳೆದ ವಿಷಯ ಹೊಸ ವಿವಾದಕ್ಕೆ ಕಾರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಮ್ ಆದ್ಮಿ ಪಕ್ಷ ತೀವ್ರವಾದಿಗಳೊಂದಿಗೆ ಸ್ನೇಹಶೀಲವಾಗುತ್ತಿದೆ ಹಾಗೂ ರಾಜ್ಯದಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿದೆ ಎಂದು ಅಕಾಲಿದಳ ಮತ್ತು ಕಾಂಗ್ರೆಸ್ ಆಪಾದಿಸಿವೆ. ಕೇಜ್ರಿವಾಲ್ ಶನಿವಾರ ರಾತ್ರಿ ಗೌಪ್ಯವಾಗಿ ಮೊಗಾಗೆ ಆಗಮಿಸಿದ್ದರು. ಜಿರಾದಲ್ಲಿ ಸಮಾವೇಶವೊಂದರಲ್ಲಿ ಭಾಗವಹಿಸಿದ ಬಳಿಕ, ಖಲಿಸ್ತಾನ್ ಕಮಾಂಡೊ ದಳ (ಕೆಸಿಎಫ್)ದ ಮಾಜಿ ಸದಸ್ಯ ಗುರೀಂದರ್ ಸಿಂಗ್ ಮನೆಯಲ್ಲಿ ಆಶ್ರಯ ಪಡೆದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗುರೀಂದರ್ 1997ರಲ್ಲಿ ಮೊಗಾ ಸಮೀಪ ಸಂಭವಿಸಿದ ಸ್ಫೋಟ ಪ್ರಕರಣವೊಂದರಲ್ಲಿ ಆರೋಪಿಯಾಗಿ ಬಳಿಕ ಖುಲಾಸೆಗೊಂಡಿದ್ದರು.